ಬಿಜೆಪಿ ಶಿವಮೊಗ್ಗ ನಗರದ ವತಿಯಿಂದ, ಸೇವೆ ಮತ್ತು ಸಮರ್ಪಣೆ ಅಭಿಯಾನದಡಿ, ಪ್ರಚಾರ ಸಮಿತಿಯು ಅಂತರ ಕಾಲೇಜು ಭಾಷಣ ಸ್ಪರ್ಧೆ ಯು ನಗರದ ಛೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಯಶಸ್ವೀಯಾಗಿ ಸಂಪನ್ನಗೊಂಡಿತು.

‌‍ಆತ್ಮನಿರ್ಭರ ಭಾರತ ಪರಿಕಲ್ಪನೆ- ನನ್ನ ಹಾಗೂ ನಮ್ಮ ಪಾತ್ರ ವಿಷಯಾಧಾರಿತ ಭಾಷಣ ಸ್ಪರ್ಧೆಯ ಲ್ಲಿ
ಕುಮಾರಿ ರುಚಿತಾ – ಪ್ರಥಮ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಪೂಜಿನಗರ)

ಕುಮಾರಿ ಮಂಜುಳಾ – ದ್ವಿತೀಯ
(ಎಸ್.ಎಂ‌ಎಸ್.ಎಫ್ ಕಾಲೇಜು)

ಕುಮಾರಿ ಶಾಲಿನಿ – ತೃತೀಯ
(ಎ.ಟಿ.ಎನ್.ಸಿ.ಸಿ ಕಾಲೇಜು)
ಯವರು ಕ್ರಮವಾಗಿ,
3000, 2000 ಹಾಗೂ1000 ರೂಗಳ
ಬಹುಮಾನಗಳನ್ನು ಪಡೆದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಭಾಗ ಪ್ರಮುಖರಾದ ಶ್ರೀ ಗಿರೀಶ್ ಪಟೇಲ್ ರವರು, ನಗರಾಧ್ಯಕ್ಷರಾದ ಶ್ರೀ ಜಗದೀಶ್ ರವರು, ಮಹಾಪೌರರಾದ ಶ್ರೀಮತಿ ಸುನಿತಾ ಅಣ್ಣಪ್ಪ ರವರು, ಶ್ರೀ ಚೆನ್ನಬಸಪ್ಪರವರು, ಶ್ರೀ ಜ್ಞಾನೇಶ್ಚರ್ ರವರು, ಪ್ರಚಾದ ಸಮಿತಿ ಸಂಚಾಲಕರಾದ ಶ್ರೀ ಮಂಜುನಾಥ್ ರವರು, ನಗರ ಮಹಿಳಾ ಮೋರ್ಛಾ ಅಧ್ಯಕ್ಷರಾದ ಶ್ರೀಮತಿ ಸುರೇಖ ಮುರಳೀಧರ್ ರವರು ಉಪಸ್ಥಿತರಿದ್ದರು.

ತೀರ್ಪುದಾರರಾಗಿ ಶ್ರೀ ವೆಂಕಟೇಶ್ ರವರು ಹಾಗೂ ಡಾ\ ಸಂತೋಷ್ ರವರು ಆಗಮಿಸಿದ್ದರು.

ವಿಜೇತರೆಲ್ಲರಿಗೂ ಬಿಜೆಪಿ ಶಿವಮೊಗ್ಗ ನಗರ ಅಭಿನಂದನೆಗಳನ್ನು ಸಲ್ಲಿಸಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ