ಇಂದು ರೋಟರಿಯಲ್ಲಿ ಸೇವಾ ದಿನದ ಪ್ರಯುಕ್ತ ನಡೆಯುತ್ತಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ಅವರು ಇಂದು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರಕ್ಕೆ 2ವರ್ಷ ಪೂರೈಸಿದ್ದು ಈ ಕೋವಿಡ ಸಂಕಷ್ಟದಿಂದಾಗಿ ಈ ದಿನವನ್ನು ಸೇವಾ ದಿನವಾಗಿ ಆಚರಿಸಲು ನಿರ್ಧರಿಸಲಾಗಿದೆ. ನಮ್ಮ ಶಿವಮೊಗ್ಗದಲ್ಲಿ ಎಲ್ಲ ಕಾರ್ಯಕರ್ತರು ಹಾಗೂ ಯುವ ಮೋರ್ಚಾದಿಂದ ಹದಿನೈದು ದಿನಗಳಲ್ಲಿ 500 ಯುನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ