ಇಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಶಾಸಕರಾದ ಕೆ.ಬಿ ಅಶೋಕ ನಾಯ್ಕ ರವರು ತನ್ನ ಕ್ಷೇತ್ರದ ಹುಣಸೊಡು ಗ್ರಾಮದಲ್ಲಿ ಜ್ಞಾನೇಶ್ವರಿ ಗೋ ಸೇವಾ ಟ್ರಸ್ಟ್ ವತಿಯಿಂದ ನೂತನ ಗೋ ಶಾಲೆ ಕಟ್ಟಡದ ಶಂಕು ಸ್ಥಾಪನೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ತಾ.ಪಂ ಮಾಜಿ ಸದಸ್ಯರು ಅಬ್ಬಲಗೆರೆ, ಸುನಿತ ಗ್ರಾ.ಪಂ ಉಪಾಧ್ಯಕ್ಷರು, ಗ್ರಾ.ಪಂ ಸದಸ್ಯರುಗಳಾದ ವೆಂಕಟೇಶ್, ಸತೀಶ್, ಲೋಕೇಶ್, ನಿರ್ಮಲ, ಹಾಗೂ ಟ್ರಸ್ಟ್‌ನ ಚಂದ್ರಹಾಸ ಪಿ ರಾಯ್ಕರ್ ಅಧಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ