ಶಿವಮೊಗ್ಗ ನ್ಯೂಸ್…

ಶಿವಮೊಗ್ಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಸಾರಾಂಗ ಹೊರತಂದ ಶತಮಾನದ ಸಾಹಿತ್ಯಸಮೀಕ್ಷೆ-ಶಿವರಾಮ
ಕಾರಂತ ಕೃತಿಯನ್ನು ಅ.೧೦ ರಂದು ಸಂಜೆ ಡಿ.ವಿ.ಎಸ್. ರಂಗಮಂದಿರದಲ್ಲಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಡಿ. ಮಂಜುನಾಥ ವಹಿಸಿದ್ದರು. ಪ್ರೊ. ಜೆ.ಎಲ್. ಪದ್ಮನಾಭ ಲೋಕಾರ್ಪಣೆ ಗೊಳಿಸಿದರು. ಪ್ರೊ. ಟಿ. ಪಿ. ಅಶೋಕ್ ಅವರು ಪುಸ್ತಕ ಕುರಿತು ಮಾತನಾಡಿದರು. ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಡಾ. ಎಚ್.ಟಿ. ಕೃಷ್ಣ ಮೂರ್ತಿ ಮಾತನಾಡಿದರು. ಸಿಂಡಿಕೆಟ್ ಸದಸ್ಯರಾದ ಡಾ. ರಘುನಾಥ್, ಡಿ.ವಿ.ಎಸ್. ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಕೊಳಲೆ ರುದ್ರಪ್ಪ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಎಸ್. ಶಿವಮೂರ್ತಿ ನಿರೂಪಿಸಿದರು. ಎಂ.ಎಂ. ಸ್ವಾಮಿ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…