ಶಿವಮೊಗ್ಗ ನ್ಯೂಸ್…

ಭೂಮಿ ಸಂಸ್ಥೆ ಹಾಗೂ ತಲಾರಿ ಹೈಟೆಕ್ ಡಯಾಗ್ನಸ್ಟಿಕ್ ವತಿಯಿಂದ ಶುಕ್ರವಾರ ಭೂಮಿ ಸಂಸ್ಥೆ ಕೇಂದ್ರ ಕಚೇರಿ ವಿನೋಭನಗರದಲ್ಲಿ ಡಾಕ್ಟರ್ A P J ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಿಗೆ ಸನ್ಮಾನಿಸಲಾಯಿತು. ಸಂಸ್ಥೆಯು ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ ಅವರು ಕಾರ್ಯಕ್ರಮದ ಸ್ವಾಗತ ಭಾಷಣ ನೆರವೇರಿಸಿದರು.


ಸಂಸ್ಥೆಯ ಅಧ್ಯಕ್ಷರು , ಚಂದ್ರೋದಯ ಪತ್ರಿಕೆಯ ಸಂಪಾದಕ ಎನ್. ವೆಂಕಟೇಶ್ , ರಂಗಕರ್ಮಿ ಶಿವಕುಮಾರ್ ಮಾರ್ವಳ್ಳಿ , ಮಾನವ ಹಕ್ಕು ಹೋರಾಟ ವೇದಿಕೆಯ ನಾಗರಾಜ್, ನ್ಯಾಯಬೆಲೆ ಅಂಗಡಿ ಗಳ ಸಂಘದ ಅಧ್ಯಕ್ಷ ನಾಗಣ್ಣ, ಸನ್ಮಾನ ಕಾರ್ಯಕ್ರಮ ನೆರವೇರಿಸಿದರು,
ಛಲದಂಕಮಲ್ಲ ಪತ್ರಿಕೆಯ ಸಂಪಾದಕರಾದ ಪದ್ಮನಾಭ, ಮಲೆನಾಡು ಎಕ್ಸ್ಪ್ರೆಸ್ ಪತ್ರಿಕೆ ಸಂಪಾದಕರಾದ ಶಿ.ಜು.ಪಾಶ, ಸೂರ್ಯಗ್ರಹಣ ಸೂರ್ಯ ಗಗನ ಪತ್ರಿಕೆ ಸಂಪಾದಕರಾದ ಗಾರ ಶ್ರೀನಿವಾಸ್ ಮತ್ತು ಮಲ್ನಾಡ್ ಸುದ್ದಿ ಸುದ್ದಿ ಪತ್ರಿಕೆಯ ಹಾಗೂ ಪಾಲಿಕೆ ಸದಸ್ಯರಾದ ಸತ್ಯನಾರಾಯಣ ರಾಜ್ ಇವರಿಗೆ ಭೂಮಿ ಸಂಸ್ಥೆ ವತಿಯಿಂದ ಡಾಕ್ಟರ್ A P J ಅಬ್ದುಲ್ ಕಲಾಂ ಅವರ ಜನ್ಮದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನವೀನ್ ತಲಾರಿ ಅವರು ಅಬ್ದುಲ್ ಕಲಾಂ ಅವರ ಬಾಲ್ಯದ ಜೀವನದ ಬಗ್ಗೆ ಅವರ ಹೋರಾಟ ಜೀವನದ ಬಗ್ಗೆ ಮಾತನಾಡಿದರು. ಸುಮಾರು ಆರು ವರ್ಷದಿಂದ ” ಅಬ್ದುಲ್ ಕಲಾಂ – ಅಮಾರ ಸಲಾಂ ” ಎಂಬ ಹೆಸರಿನಲ್ಲಿ ನಿರಂತರವಾಗಿ ಜನ್ಮದಿನಾಚರಣೆಯನ್ನು ಆಚರಿಸಿಕೊಂಡು ಬಂದಿದ್ದೇನೆ ಎಂದು ಮಾತನಾಡಿದರು.
ಅತಿಥಿಗಳಗಿ ಆಗಮಿಸಿದ್ದ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಶುಭಕೋರಿದರು.
ಭೂಮಿ ಸಂಸ್ಥೆ ಯ ಅಧ್ಯಕ್ಷರಾದ ಎನ್ ವೆಂಕಟೇಶ್ ಕಾರ್ಯಕ್ರಮದ ವಂದನಾರ್ಪಣೆ ನೆರವೇರಿಸಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ…