ಸಾಗರ ನ್ಯೂಸ್…

ಯಡೇಹಳ್ಳಿ ಗ್ರಾ.ಪಂ ಸರಗುಂದ ಗ್ರಾಮದ ಸ್ಕಂದನ s/o ಬೋಜಪ್ಪ ಎಂಬ ಬಾಲಕನಿಗೆ ಕೆಲ ತಿಂಗಳ ಹಿಂದೆ ಹಾವು ಕಡಿದು ಕಾಲು ಕೊಳೆಯುತ್ತಿರುವ ಸ್ಥಿತಿಯಲ್ಲಿರುವ ವಿಷಯ ತಿಳಿದು, ಶಾಸಕರಾದ ಹಾಲಪ್ಪ ನವರು ಸ್ಕಂದನ್ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

ಸ್ಕಂದನ್ ಕಾಲಿನ ಗಾಯ ವಾಸಿಯಾಗಿ ಚೇತರಿಸಿಕೊಳ್ಳುತ್ತಿದ್ದು, ಇಂದು (29-10-2021) ಮಾನ್ಯ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ, ಬಾಲಕನ ಆರೋಗ್ಯ ವಿಚಾರಿಸಿ ಗುಣ ಆಗಲೆಂದು ಹಾರೈಸಿದರು. ನಂತರ ವೈದ್ಯಾಧಿಕಾರಿಗಳ ಸಭೆ ನೆಡೆಸಿ,ಆರೋಗ್ಯ ಇಲಾಖೆ ಆಯುಕ್ತರಿಗೆ ಕರೆ ಮಾಡಿ ಸದರಿ ಆಸ್ಪತ್ರೆಯಲ್ಲಿ ಸಾವಿರಾರು ಜನ ಚಿಕಿತ್ಸೆ ಪಡೆಯುತ್ತಿದ್ದು ಅಗತ್ಯವಾದ ಔಷದಿಗಳ ಕೊರತೆಯಿದ್ದು, ಶೀಘ್ರದಲ್ಲಿ ಪೂರೈಸುವಂತೆ ಸೂಚಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…