ಭಾವಪೂರ್ಣ ಶ್ರದ್ಧಾಂಜಲಿ…

ಕರುನಾಡನ್ನು ಅಗಲಿದ..ಕರುನಾಡ ಕಣ್ಮಣಿ..ಮಾನವತೆಯ ಸಾಕಾರ ಮೂರ್ತಿ…ಪುನೀತ್ ರಾಜ್ ಕುಮಾರ್ ಅವರಿಗೆ…ನನ್ನ ಭಾವಪೂರ್ಣ ನುಡಿನಮನಗಳು…

‘ಚಲಿಸಿದ ಮೋಡ’ವೊಂದು
ಎಲ್ಲರ ಕಂಗಳಲ್ಲಿ ಹನಿನೀರ
ಹರಿಸಿ..ಇರುಳು ಬರುವ ಮುನ್ನವೇ
ಬಾಡಿಹೋಯಿತು ‘ಬೆಟ್ಟದ ಹೂ’

ನಡೆನುಡಿಯಲ್ಲಿ ಸಹಜ
ಸರಳತೆಯ ದೊಡ್ಮನೆ ಹುಡುಗ
ಅನಾಥರ ವೃದ್ಧರ ಆಶ್ರಯದಾತ
ಈ ಕರುನಾಡ ‘ ಅರಸು’

‘ಆಕಾಶ’ ದೆತ್ತರಕ್ಕೆ ಮಿನುಗಿದ ತಾರೆ
ಎಲ್ಲರೆದೆಯಲಿ ‘ಅಪ್ಪು’ ಪ್ರೀತಿ
‘ರಣವಿಕ್ರಮ’ ನಂತೆ ಯುದ್ಧಕ್ಕೂ ಸೈ
ಪ್ರೀತಿಗೂ ಸೈಯೆನಿಸಿದ ‘ ರಾಮ’

ನಟನೆಯಲ್ಲಿ ಸಾರ್ವಭೌಮ
ಭಕ್ತಿಯಲಿ ‘ ಪ್ರಹ್ಲಾದ’
ಬದುಕಿನ ‘ಚಕ್ರವ್ಯೂಹ’ ವ
ಭೇಧಿಸಿದ ‘ಯುವರತ್ನ’

ಮುಗ್ಧ ನಗುವಿನ ಸರದಾರ
ಪ್ರೀತಿಯನ್ನು ಎಲ್ಲರಲ್ಲಿ ಹಂಚಿ
ತನ್ನ ಬದುಕನ್ನು ಮಾದರಿಯಾಗುಳಿಸಿ
ಹೊರಟ “ರಾಜಕುಮಾರ”

ಬಣ್ಣದ ಲೋಕದ ನಕ್ಷತ್ರ ಕಳಚಿ
ಕಡುಕತ್ತಲೆ ಮನದ ತುಂಬ
ಮೌನವಾಯಿತು ಕುಣಿದ ಗೆಜ್ಜೆ
ಹಾಡ ಮರೆತು….ಹಾರಿತು..ಕಾಣದ ಕಡಲಿಗೆ.

*ಶ್ರೀಮತಿ.ಅನಿತಕೃಷ್ಣ* *ಶಿಕ್ಷಕಿ.ತೀರ್ಥಹಳ್ಳಿ*