ಭಾವಪೂರ್ಣ ಶ್ರದ್ಧಾಂಜಲಿ…

ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ವಿದ್ಯಾರ್ಥಿ ಸಂಘಟನೆಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

ನಟಸಾರ್ವಭೌಮ ಪುನೀತ್ ರಾಜಕುಮಾರ್ ರವರು ವಿಧಿವಶ ವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಶೋಕದ ಸಂಗತಿ ಈ ನಾಡು ಕಂಡ ಶ್ರೇಷ್ಠ ನಟನಿಗೆ ವಿದ್ಯಾರ್ಥಿ ಸಂಘಟನೆಯ ರಾಜ್ಯ ಅಧ್ಯಕ್ಷರಾದ ವಿನಯ್ ಕೆಸಿ ರಾಜವತ್ ರವರು ಹಾಗೂ ಸದಸ್ಯರು ಸೇರಿ ಶಿವಮೂರ್ತಿ ವೃತ್ತ ಹಾಗೂ ನೆಹರು ಕ್ರೀಡಾಂಗಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ವಿನಯ್ ಕೆ.ಸಿ ರಾಜಾವತ್ ರವರು ಜೀವ ಹಾಗೂ ಜೀವನ ಶಾಶ್ವತವಲ್ಲ ವ್ಯಕ್ತಿತ್ವ ಹಾಗೂ ವಿಚಾರಗಳು ಶಾಶ್ವತವಾಗಿರುತ್ತದೆ ಇರುವಷ್ಟು ದಿನ ಒಳ್ಳೆಯದನ್ನು ಮಾಡಿ ಒಳ್ಳೆಯದನ್ನ ಮಾತನಾಡಿ ಎಂದು ಹೇಳಿ ಭಾವುಕರಾದರು.

ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಯ ಮುಖಂಡರಾಗಿರುವ ವೆಂಕಟೇಶ್ ನಾಯಕ ಡಿ, ನಿಖಿಲ್ ಕೆ, ಶ್ರೀನಿವಾಸ್, ವಿನಯ್ ಹೆಚ್ ಟಿ, ದಿನೇಶ್, ಶಿವು, ಇತರರು ಹಾಗೂ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸಂಘಟನೆಯ ಸದಸ್ಯರು ಕ್ರೀಡಾಪಟುಗಳು ಭಾಗವಹಿಸಿದ್ದರು ಇದರ ಒಂದು ಭಾಗವಾಗಿ ಶಿವಮೊಗ್ಗ ಸೈಯದ್ ಗಾಯಕರು ಪುನೀತ್ ರಾಜಕುಮಾರ್ ರವರ ಅಭಿನಯಿಸಿರುವ ಚಲನಚಿತ್ರ ಗೀತೆಗಳನ್ನು ಹಾಡಿದಾಗ ಎಲ್ಲರ ಕಣ್ಣು ತುಂಬಿ ಬಂದಿದ್ದು ಶಿವಮೊಗ್ಗದ ಅಭಿಮಾನಕ್ಕೆ ಸಾಕ್ಷಿಯಾಗಿತ್ತು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…