66 ಕನ್ನಡ ರಾಜ್ಯೋತ್ಸವ…

ಕರುನಾಡ ಯುವಶಕ್ತಿ ಸಂಘಟನೆ (ಕೆ.ವೈ.ಎಸ್) ವತಿಯಿಂದ ಇಂದು ಬೆಳಿಗ್ಗೆ 8:30ಕ್ಕೆ ಪೊಲೀಸ್ ಚೌಕಿಬಳಿ ಇರುವ ವರ್ಡ್ ಸ್ಪೋಟ್ಸ್ ಫಿಟ್ನೆಸ್ ಜಿಮ್ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿ ದೇವಿಗೆ ವಿಷೇಶ ಪೂಜೆ ಸಲ್ಲಿಸಲಾಯಿತು. ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು . ಹಾಗೂ ,
ಕಾರ್ಯಕ್ರಮಕ್ಕೆ ಮುಖ್ಯಅಥಿತಿಯಾಗಿ , ಪಾಲಿಕೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅದ್ಯಕ್ಷ ದೀರರಾಜ್ ಹೊನ್ನವಿಲೆ, ಹಣಕಾಸು ಸ್ಥಾಯಿ ಸಮಿತಿ ಅದ್ಯಕ್ಷೆ ಅನಿತಾ ರವಿಶಂಕರ್, ಸಂಸ್ಥಾಪಕ ಅಧ್ಯಕ್ಷರು ಎಸ್ ವಸಂತ್ ಕುಮಾರ್, ರಾಜ್ಯಾಧ್ಯಕ್ಷರು ಎ ಆರ್ ಶರವಣ,ರಾಜ್ಯ ಯುವ ಘಟಕದ ಅಧ್ಯಕ್ಷ ಎ ಎಸ್ ಚಿದಾನಂದ, ಶಿವಣ್ಣ, ಚರಣ್ ತೇಜು, ಪ್ರಕಾಶ್ ಏನ್, ನಂದೀಶ್ ಕುಮಾರ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…