66 ಕನ್ನಡ ರಾಜ್ಯೋತ್ಸವ…

ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿ “ಮಲೆನಾಡು ಕನ್ನಡ ಪಡೆ”ಯಿಂದ ಪ್ರತಿಷ್ಠಾಪಿಸಲಾಗಿರುವ ಶಾಶ್ವತ ಕನ್ನಡ ಧ್ವಜಸ್ತಂಭದ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಕನ್ನಡ ಸಾಂಸ್ಕೃತಿಕ ರಾಯಬಾರಿ ಪುನೀತ್ ರಾಜಕುಮಾರ್ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷರಾದ ಎಂ.ಬಿ ಮಲ್ಲಿಕಾರ್ಜುನ ಮರಡಿ, ಅಧ್ಯಕ್ಷರಾದ ಮಂಜುನಾಥ್ ಪೂಜಾರಿ, ಪ್ರಮುಖರಾದ ಶಂಕರ್, ಪತ್ರಕರ್ತರಾದ ಗಾರಾ.ಶ್ರೀನಿವಾಸ್, ಪದ್ಮನಾಬ್, ಚಂದ್ರಶೇಖರ್, ಹಾಗೂ ರಂಗಕರ್ಮಿಗಳಾದ ಶಿವಕುಮಾರಯ್ಯ ಮಾರವಳ್ಳಿ, ದಾಮಧರರಾವ್, ಮಾನವ ಹಕ್ಕುಗಳ ಹೋರಾಟ ಸಲಹಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಎಮ್ ಸಿಗ್ಬತ್ ಉಲ್ಲಾ, ಸ್ಥಳೀಯ ಮುಖಂಡರಾದ ಪುಟ್ಟಣ್ಣ, ದಳವಾಯಿ, ಚೆನ್ನುಡಿ ತ್ಯಾಗರಾಜ್, ಯೋಗ ಶಿಕ್ಷಕರಾದ ಅನಿಲ್ ಕುಮಾರ್, ಉದ್ಯಮಿಗಳಾದ ಚಂದ್ರಹಾಸ್ ಎನ್ ರಾಯ್ಕರ್, ಅನಿಲ್ ವರ್ಣೆಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…