ಶಿವಮೊಗ್ಗ ನ್ಯೂಸ್…

ಅಶ್ವಾಕ್ ವಿ ಠಗರಿ, 25 ವರ್ಷ, ಯರ್ನಾಡ ಗ್ರಾಮ, ಬೆಳಗಾವಿ ಜಿಲ್ಲೆ ಇವರು ಕೇಂದ್ರ ಕಾರಾಗೃಹ ಶಿವಮೊಗ್ಗದಲ್ಲಿ ವಾರ್ಡನ್ ಕೆಲಸ ನಿರ್ವಹಿಸುತ್ತಿದ್ದು, ಕಾರಾಗೃಹದ ಆವರಣದಲ್ಲಿನ ವಸತಿ ಗೃಹದಲ್ಲಿಯೇ ವಾಸವಾಗಿರುತ್ತಾರೆ. ಹೆಂಡತಿ ಶಿಫಾನರವರು ತನ್ನ ತಂದೆಯ ಮನೆಗೆ ಹೋಗಿದ್ದು, ದಿನಾಂಕಃ-03-11-2021 ರಂದು ರಾತ್ರಿ 09-00 ಗಂಟೆಗೆ ಅಶ್ವಾಕ್ ನು ತನ್ನ ಹೆಂಡತಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದು ಶಿಫಾನರವರ ತಂದೆ ತಕ್ಷಣ ಅಶ್ವಾಕ್ ನ ಸಹೋದ್ಯೋಗಿಯಾದ ಗಜೇಂದ್ರ ರವರಿಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸಿ ಕೂಡಲೇ ವಸತಿ ಗೃಹಕ್ಕೆ ಹೋಗಿ ನೋಡಲು ಹೇಳಿದ್ದು,

ತಕ್ಷಣ ವಸತಿ ಗೃಹಕ್ಕೆ ಹೋಗಿ ಬಾಗಿಲು ತೆಗೆದು ನೋಡಿದಾಗ ಬೆಡ್ ರೂಂ ನ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಕೇಂದ್ರ ಕಾರಾಗೃಹದ ಜೈಲರ್ ರವರು ನೀಡಿದ ದೂರಿನ ಮೇರೆಗೆ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿರುತ್ತದೆ. ಅಶ್ವಾಕ್ ರವರ ಕುಟುಂಬಸ್ಥರನ್ನು ವಿಚಾರಣೆ ಮಾಡಿದಾಗ ಅಶ್ವಾಕ್ ನು ಕಳೆದ 02 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುತ್ತದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…