ಡಿಡಿ ಚಂದನವಾಹಿನಿ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿದ್ದ ಕೆ.ಎ. ನಾಗೇಶ್ ನಿಧನಕ್ಕೆ ಪತ್ರಿಕಾ ಭವನದಲ್ಲಿ ಸಂತಾಪ ಸೂಚಿಸಲಾಯಿತು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ನಾಗೇಶ್ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.ಸಭೆಯಲ್ಲಿ ಪತ್ರಕರ್ತರಾದ ಶಿವಮೊಗ್ಗ ನಂದನ್, ಜೇಸುದಾಸ್, ಪದ್ಮನಾಭ, ಹಾಲಸ್ವಾಮಿ ಆರ್.ಎಸ್., ಪಿಸಿ. ನಾಗರಾಜ್, ಸ್ಪಂದನಾ ಚಂದ್ರು, ರಾಜೇಶ್ ಕಾಮತ್, ಕಿರಣ್ ಕಂಕಾರಿ, ಭರತೇಶ್, ಶಿವಾನಂದ್, ಅತೀಕ್ ಅಹ್ಮದ್, ಬಸವರಾಜು, ಶಶಿಧರ್, ರಾಘು, ಚಿನ್ನು, ಸಾವಂತ ಇನ್ನಿತರರು ಇದ್ದರು.

ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಒಂದು ನಿಧಿ ಸ್ಥಾಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.  ಅಪತ್ತಿಗೆ ಒಳಗಾದ ಪತ್ರಕರ್ತರಿಗೆ ಈ ನಿಧಿ ಮೂಲಕ ನೆರವು ನೀಡಲು ಸಭೆ ನಿರ್ಧರಿಸಿತು.