ಬೆಂಗಳೂರು ನ್ಯೂಸ್…

ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣ ಸಂದರ್ಭದಲ್ಲಿ ಸರ್ಕಾರ ಮತ್ತು ಗೃಹ ಇಲಾಖೆ ವಹಿಸಿದ ಎಚ್ಚರಿಕೆ ಮತ್ತು ಅಂತಿಮ ವಿಧಿ ವಿಧಾನದ ಕೊನೆಯ ಹಂತದವರೆಗೆ ನಿರ್ವಹಿಸಿದ ಕಾನೂನು ಸುವ್ಯವಸ್ಥೆಯ ಕಾರಣದಿಂದ ಯಾವುದೇ ಅನಾಹುತ ಅವಘಡಗಳಾಗದ ರೀತಿಯಲ್ಲಿ ಪುನೀತ್ ರವರ ಅಂತ್ಯ ಸಂಸ್ಕಾರ ಕಾರ್ಯವನ್ನು ಮಾಡಲಾಗಿತ್ತು.

ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರಿಗೆ ಧನ್ಯವಾದಗಳು…

ಅದರಿಂದ ಬೆಂಗಳೂರಿನಲ್ಲಿ ರಾಜ್ ಕುಟುಂಬದ ಸದಸ್ಯರು ಕರ್ನಾಟಕ ಸರ್ಕಾರದ ಗೃಹ ಮಂತ್ರಿ ಆರಗ ಜ್ಞಾನೇಂದ್ರರವರನ್ನು ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಬೇಟಿಯಾಗಿ ಕೃತಜ್ಞತೆ ಸಲ್ಲಿಸಿದರು ಮತ್ತು ಪುನೀತ್ ರಾಜಕುಮಾರ್ ಪತ್ನಿ ಆಶ್ವಿನಿಯವರ ಧನ್ಯವಾದ ಸಮರ್ಪಣಾ ಪತ್ರವನ್ನು ಗೃಹ ಮಂತ್ರಿಗಳಿಗೆ ಹಸ್ತಾಂತರಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…