ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ನಗರದ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆಯಿಂದ ಇಂದು ಪಂಪನಗರ ಎರಡನೇ ತಿರುವಿನಲ್ಲಿ ಆಯೋಜಿಸಿದ್ದ ಸಸ್ಯಾಹಾರಿ ಮತ್ತು ಮಾಂಸಹಾರಿ ಖಾದ್ಯಗಳು, ವಸ್ತ್ರವಿನ್ಯಾಸಗಳು, ಗೃಹೋಪಯೋಗಿ ಮತ್ತು ಅಲಂಕಾರಿಕಾ ಸಾಮಗ್ರಿಗಳು, ವೈನ್ಸ್ ಮತ್ತು ರುಚಿಕರ ತಿನಿಸುಗಳ ಮಾರಾಟ ಮತ್ತು ಪ್ರದರ್ಶನದ ಮಲೆನಾಡು ಮೇಳವನ್ನು ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಉದ್ಘಾಟಿಸಿದರು.

ಭಾರತಿ, ಯಮುನಾ ರಂಗೇಗೌಡ, ಜ್ಞಾನೇಶ್ವರ್, ರಮೇಶ್ ಹೆಗ್ಡೆ, ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀಕಾಂತ್, ವೇದಿಕೆಯ ಪದಾಧಿಕಾರಿಗಳಾದ ಅಂಜು ಸುರೇಶ್, ಸುಪ್ರಿಯಾ ರಾಮಪ್ಪ, ಸುಪ್ರಿಯಾ ರಮೇಶ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…