ಭದ್ರಾವತಿ ನ್ಯೂಸ್…

ಇಂದು ಭದ್ರಾವತಿ ತಾಲೂಕು ಗೋಣಿಬೀಡಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಸ್ಮರಣಾರ್ಥವಾಗಿ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಕ್ತದಾನ ಶಿಬಿರವನ್ನು ನಡೆಸಲಾಯಿತು.

ಈ ಕಾರ್ಯಕ್ರಮವು ಬಿ.ಅರ್.ಪಿ ಘಟಕದ ಅಧ್ಯಕ್ಷರಾದ ತ್ಯಾಗರಾಜ್ ರವರ ಮಾರ್ಗದರ್ಶನದಲ್ಲಿ ನಡೆಯಿತು. ಮಲಿಗೆನಹಳ್ಳಿ ಕ್ಯಾಂಪ್ನ ಗ್ರಾಮಸ್ಥರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಸುಬ್ಬಯ್ಯ ಆಸ್ಪತ್ರೆ ಸಿಬ್ಬಂದಿಗಳು ಗೋಣಿಬೀಡಿನ ಗ್ರಾಮಸ್ಥರು ಜಯಕರ್ನಾಟಕ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ತ್ಯಾಗರಾಜ್ ಮಹೇಶ್ ಗೌಡ ವಿಜಯಕುಮಾರ್ ಎಸ್ ಚೇತನ್ ಕುಮಾರ್ ಪಾಪನಾಯಕ ಹಾಗೂ ಗೋಣಿಬೀಡು ಮಲಿಗೆನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…