ಶಿವಮೊಗ್ಗ ನ್ಯೂಸ್…

ಯಕ್ಷಕಲಾ ಅಭಿಮಾನಿ ಬಳಗ ಶಿವಮೊಗ್ಗ, ಶಿವಮೊಗ್ಗ ಸರ್ವ ಯಕ್ಷ ತಂಡಗಳ ಒಕ್ಕೂಟ ದಿಂದ ನಿನ್ನೆ ರವೀಂದ್ರ ನಗರದ ಶ್ರೀ ಬಲಮುರಿ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರಾದ  ಎಂ. ಕೆ. ರಮೇಶ್ ಆಚಾರ್ಯ ಮತ್ತು ತೀರ್ಥಹಳ್ಳಿಯ ಗೋಪಾಲ್ ಆಚಾರ್ಯರಿಗೆ ಸನ್ಮಾನ ಸಮಾರಂಭ ನಡೆಯಿತು.

ಬಳಿಕ ಶರಸೇತುಬಂಧನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅ.ಪ. ರಾಮಭಟ್, ಕಾರ್ಯಕ್ರಮದ ಸಂಚಾಲಕರಾದ ಅಚ್ಯುತ ಹೆಬ್ಬಾರ್, ದತ್ತಮೂರ್ತಿ ಭಟ್, ಕೆ.ಜಿ. ವೆಂಕಟೇಶ್, ರಘುರಾಮ ದೇವಾಡಿಗ, ಭಾಸ್ಕರ ಕಾಮತ್, ಬಿ.ಎಸ್. ಕಾಮತ್, ಪ್ರಕಾಶ್ ಪ್ರಭು, ಶಶಿಕುಮಾರ್, ಶ್ರೀನಿವಾಸ್ ಆಚಾರ್, ಆನಂದಶೆಟ್ಟಿ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…