ಶಿವಮೊಗ್ಗ ಜಿಲ್ಲಾಡಳಿತವು ನಿನ್ನೆಯಷ್ಟೇ ಗುರುವಾರದಿಂದ ಭಾನುವಾರದ ತನಕ ಸಂಪೂರ್ಣ ಬಂದ್ ಎಂದು ನಿರ್ಬಂಧ ಹೇರಿದ್ದರು . ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ನಿರ್ಧಾರದಿಂದಾಗಿ ಎರಡೂ ಹಬ್ಬಗಳಿಗೆ ತೊಂದರೆಯಾಗುತ್ತದೆ .

ಆದ್ದರಿಂದ ಗುರುವಾರದಿಂದ ಭಾನುವಾರದವರೆಗೆ ಆರರಿಂದ ಹತ್ತು ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಬೇಕಾಗಿ ಮನವಿ ಮಾಡಿದರು, ಅದಕ್ಕೆ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ರವರು ತಿಳಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರುಗಳಾದ ನಾಗರಾಜ್ ಕಂಕಾರಿ, ಶಮೀರ್ ಖಾನ್ ಮುಖಂಡರಾದ ರಂಗನಾಥ್ , ಗಿರೀಶ್ , ನಾಗರಾಜ್ , ಉಪಸ್ಥಿತರಿದ್ದರು