17/11/21 ಶಿವಮೊಗ್ಗ ನಗರ, ಅಶೋಕ ನಗರದಲ್ಲಿ ಇರುವ ಸಾರ್ವಜನಿಕ ಪಾರ್ಕನ್ನು (ಉದ್ಯಾನವನ) ಬೀದಿ ಬದಿ ವ್ಯಾಪಾರಸ್ಥರು ಸ್ವಚ್ಛತೆ ಮಾಡಿದರು,

ಪ್ರತಿ ವರ್ಷ, ಪ್ರತಿ ದಿನವೂ ಜನಪ್ರತಿನಿಧಿಗಳ ಹುಟ್ಟು ಹಬ್ಬವೂ ಬರುತ್ತಿರಲಿ, ಇಂತಹ ಸಂದರ್ಭದಲ್ಲಿ ಅಭಿಮಾನಿ ಬಳಗದವರು, ದೇವಾಲಯಗಳಲ್ಲಿ ವಿಶೇಷ ಪೂಜೆ ಹವನಗಳ ನಡೆಸುವರು, ಶಾಲಾಮಕ್ಕಳಿಗೆ ಸಿಹಿತಿಂಡಿಗಳ ಹಂಚುವರು, ರೋಗಿಗಳಿಗೆ ಹಣ್ಣು ಹಂಪಲು ಹಂಚುವರು, ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಹೊದಿಕೆಯ ನೀಡುವರು, ನಿರಾಶ್ರಿತರಿಗೆ ಬಟ್ಟೆಯ ನೀಡುವರು, ಹಾಗಾಗಿ ವರ್ಷಕ್ಕೆ ಮಾತ್ರ ಸಿಮಿತವಾಗಿರದೆ ನಮ್ಮ ನಾಡಿನ ಜನಪ್ರತಿನಿಧಿಗಳ ಹಾಗೂ ಮೆಚ್ಚಿನ ನಾಯಕರ ಜನ್ಮದಿನದವೂ, ದಿನನಿತ್ಯವೂ ಇರಲಿ, ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಹೇಳಿದರು.

ನಿಕಟಪೂರ್ವ ಶಿವಮೊಗ್ಗ ನಗರದ ಶಾಸಕರಾದ ಸನ್ಮಾನ್ಯ ಶ್ರೀ ಕೆ.ಬಿ. ಪ್ರಸನ್ನಕುಮಾರ್ ರವರಿಗೆ, ಸುಗಂಧರಾಜ ಹೂವಿನ ಹಾರ ಹಾಕಿ, ಹೂವಿನ ಕುಚ್ಛವ ಜೋತೆಗೆ ಗಿಡದ ಬೊಕ್ಕೆಯ ನೀಡಿ, ಗಿಡವ ನೆಡುವುದರ ಮೂಲಕ 54ನೇ ಜನ್ಮದಿನದ ಶುಭಾಶಯಗಳನ್ನು ಬೀದಿ ಬದಿ ವ್ಯಾಪಾರಸ್ಥರು ಕೋರಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಪದಾಧಿಕಾರಿಗಳಾದ ಶ್ರೀ ಮಣಿ, ಶ್ರೀ ಗೋಪಾಲ್, ಶ್ರೀಮತಿ ರಂಗಮ್ಮ ಹನುಮಂತಪ್ಪ, ಶ್ರೀ ಮತಿ ಯಶೋಧ, ಮತ್ತು ಪ್ರಮುಖರು ಹಾಗೂ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.