ಶಿವಮೊಗ್ಗ ನ್ಯೂಸ್…

ಇಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಪೊಲೀಸರಿಗೆ ಕರಾಟೆ ಕೌಶಲ್ಯ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ಶಿವಮೊಗ್ಗ ನಗರದ ದಕ್ಷ ಹಾಗೂ ಜನ ಸ್ನೇಹಿ ಅಧಿಕಾರಿ ಡಿ ವೈಎಸ್ ಪಿ ಪ್ರಶಾಂತ್ ಜಿ ಮುನ್ನೋಳಿ ರವರು ನಗರದ ಡಿ ಆರ್ ಗ್ರೌಂಡ್ ನಲ್ಲಿ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಶಿಹಾನ್ ಶಿವಮೊಗ್ಗ ವಿನೋದ್ ಮತ್ತು ಕರಾಟೆ ಸಂಸ್ಥೆಯ ತರಬೇತಿದಾರರಾದ ಶಿಹಾನ್ ಜಸ್ಟಿನ್ ಸನ್ ಸೈ ವೆಂಕಟೇಶ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…