ಶಿವಮೊಗ್ಗ ನ್ಯೂಸ್…

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಿ.ಮಂಜುನಾಥ ಆಯ್ಕೆಯಾಗಿದ್ದಾರೆ.

ಪ್ರತಿಸ್ಪರ್ಧಿ ಡಿ.ಬಿ.ಶಂಕರಪ್ಪ ಅವರಿಗಿಂತ 441 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕಣದಲ್ಲಿ ನಾಲ್ವರು ಇದ್ದು ಈ ಪೈಕಿ ಡಿ. ಮಂಜುನಾಥ 2,756 ಮತ, ಡಿ.ಬಿ.ಶಂಕರಪ್ಪ 2314, ಶಿ.ಜು.ಪಾಶ 249 ಹಾಗೂ ಗಾ.ರಾ.ಶ್ರೀನಿವಾಸ್ 49 ಮತಗಳನ್ನು ಪಡೆದರು.ಜಿಲ್ಲೆಯಲ್ಲಿ 9,143 ಮತದಾರರಿದ್ದು, 5,417 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.  ಸಂಜೆ 4 ಗಂಟೆಗೆ ಮತದಾನ ಕೊನೆಗೊಂಡ ಬಳಿಕ ಆಯಾ ತಾಲೂಕು ಕೇಂದ್ರಗಳಲ್ಲಿ ಮತಗಳ ಎಣಿಕೆ ನಡೆದು ಫಲಿತಾಂಶ ಘೋಷಣೆ ಮಾಡಲಾಯಿತು.

ವಿಜಯೋತ್ಸವ: ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಡಿ.ಮಂಜುನಾಥ ಬೆಂಬಲಿಗರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…