ಗದಗ ನ್ಯೂಸ್…

ನವಿಲುಗರಿ ‘ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ) ಧಾರವಾಡ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಪ್ರಯುಕ್ತ ಧಾರವಾಡದ ರಂಗಾಯಣದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ಧ ಕನ್ನಡ ಹಬ್ಬದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳ ಮೂಲಕ ಸಹಸ್ರಾರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜನಪದ ಕೂಗು ಶಿಕ್ಷಣ ನೀಡಿದ ಸಮಾಜಿಕ ಹೋರಾಟಗಾರ ಖ್ಯಾತ ಜನಪದ ಕಲಾವಿದ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠರವರಿಗೆ ‘ನವಿಲುಗರಿ’ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಧಾರವಾಡದ ಹಿರಿಯ ಸಾಹಿತಿ ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ, ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನಿರ್ದೇಶಕರಾದ ಶ್ರೀ ಶರಣು ಅಂಗಡಿ,ನಂದಗಡದ ಸಿ,ಪಿ,ಐ,ಶ್ರೀ ಸತೀಶ ಮಳಗೊಂಡ, ಹುಬ್ಬಳ್ಳಿ ಇನ್ಸ್ಪೆಕ್ಟರ್ ಹೆಸ್ಕಾಂ ಶ್ರೀ ಮುರಗೇಶ ಚೆನ್ನನ್ನವರ,ನವಿಲುಗರಿ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಶ್ರೀಮತಿ ಪ್ರತಿಭಾ ಪಾಟೀಲ,ಮೇಘಾ ಹುಕ್ಕೇರಿ, ಹಿರಿಯ ಸಾಹಿತಿಗಳಾದ ಶ್ರೀ ಶಂಕರ ಹಲಗತ್ತಿ, ಶ್ರೀ ಸಾಯಿ ಪದವಿ ಪೂರ್ವ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ವೀಣಾ ಬಿರಾದರ್, ಪಿ.ಟಿ.ಎಲಿಗಾರ ಶಿಕ್ಷಣ ಸಂಸ್ಥೆಯ ಶ್ರೀ ಶಶಿಧರ ಎಲಿಗಾರ,ಉಪನ್ಯಾಸಕರಾದ ಸಂತೋಷ ಬದ್ರಾಪೂರ ಸೇರಿದಂತೆ ಕವಿಗಳು, ಕಲಾವಿದರು ಪಾಲ್ಗೋಂಡಿದ್ಧರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…