ದಿನಾಂಕ 29-11-2021ರ ದಶಮಿ ತಿಥಿಯ ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಶಿವಮೊಗ್ಗ ನಗರದ ಊರಗಡೂರಿನ ಗುಡ್ಡೆ ಮರಡಿಯ ಶ್ರೀ ಮಲ್ಲೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ನಗರ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಸಹಸ್ರಾರ್ಚನೆ ಹಾಗೂ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ 115 ಕಾರ್ಯಕರ್ತೆಯರು ಸಹಸ್ರಾರ್ಚನೆಯಲ್ಲಿ ಪಾಲ್ಗೊಂಡು ಧನ್ಯರಾದರು.

ರಾಜ್ಯ ಪ್ರಕೋಷ್ಠಗಳ ಸಂಯೋಜಕರಾದ ಶ್ರೀಯುತ ಎಂ‌.ಬಿ. ಭಾನುಪ್ರಕಾಶ್, ನಗರ ಅಧ್ಯಕ್ಷರಾದ ಶ್ರೀಯುತ ಜಗದೀಶ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಸುರೇಖಾ ಮುರಳಿಧರ್, ಪ್ರಧಾನ ಕಾರ್ಯದರ್ಶಿ ಶ್ರೀಮತಿ ರಶ್ಮಿ ಶ್ರೀನಿವಾಸ್, ಜಿಕ್ಕಮಗಳೂರು ಜಿಲ್ಲಾ ಮಹಿಳಾ ಪ್ರಭಾರಿ ಶ್ರೀಮತಿ ರೇಣುಕಾ ನಾಗರಾಜ್, ಸೂಡಾ ಸದಸ್ಯರಾದ ಶ್ರೀಮತಿ ಉಮಾಮೂರ್ತಿ, ಶ್ರೀಯುತ ದೇವರಾಜ್, ಮಹಾ ನಗರಪಾಲಿಕೆ ಸದಸ್ಯರಾದ ಶ್ರೀಮತಿ ಸಂಗೀತಾ ನಾಗರಾಜ್, ಲಕ್ಷ್ನೀ ಶಂಕರನಾಯ್ಕ್, ಶ್ರೀಮತಿ ಕಲ್ಪನಾ ರಮೇಶ್, ನಗರ ಸಮಿತಿ ಹಾಗೂ ನಗರ ಮಹಿಳಾ ಮೋರ್ಛಾದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…