ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಒಕ್ಕೂಟಗಳ ಪದಾಧಿಕಾರಿಗಳು ಡಿಸೆಂಬರ್ 26ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ವಿಶ್ವ ರೈತ ದಿನಾಚರಣೆ ಆಚರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣ ರೆಡ್ಡಿಯವರು ರೈತರು ಜಾಗತಿಕವಾಗಿ ಬೆಳೆದು ಜೀವಸಂಕುಲಕ್ಕೆ ನೀಡುವ ಸ್ವಾರ್ಥರಹಿತ ಸೇವೆ ಸ್ಮರಣಾರ್ಥವಾಗಿ ಆಚರಿಸಲಾಗುವ ವಿಶ್ವ ರೈತ ದಿನಾಚರಣೆ ಯನ್ನು ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ ಇಪ್ಪತ್ತ್ 3ರಂದು ಆಚರಿಸುತ್ತಿದ್ದು ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನಗಳನ್ನು ಆಚರಿಸಲ್ಪಡುತ್ತದೆ.

ಇದೇ ಡಿಸೆಂಬರ್ 26 ರಂದು ಮೈಸೂರಿನಲ್ಲಿ ವಿಶ್ವ ರೈತ ದಿನಾಚರಣೆ ಆಚರಿಸಲಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳು ವಿರೋಧ ಪಕ್ಷದ ನಾಯಕರು ಪ್ರತಿಷ್ಠಿತ ಮಠಾಧೀಶರು ಕೇಂದ್ರ ಮಂತ್ರಿಗಳು ಸರ್ಕಾರ ಅಧಿಕಾರ ವರ್ಗ ಮಾಧ್ಯಮ ಮುಖ್ಯಸ್ಥರು ರೈತಾಪಿ ಜನರು ಭಾಗವಹಿಸಿ ನಮ್ಮ ರೈತರ ಎಂದು ಭಾವಿಸಿ ಬೆಂಬಲಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಬಸವರಾಜ ಪಾಟೀಲ್ ಸುರೇಶ್ ಪಾಟೀಲ್ ಶಿವಕುಮಾರ್ ದೇವರಾಜ್ ಶಿವರುದ್ರಪ್ಪ ಗೋವಿಂದ್ರಾಜ್ ತೇಜಸ್ವಿ ಪಟೇಲ್ ಹಾಜರಿದ್ದರು.

ವರದಿ ಮಂಜುಳಾ ರೆಡ್ಡಿ ಬೆಂಗಳೂರು