ವಿಧಾನಸಭೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತವಿದೆ. ಈ ಚುನಾವಣೆ ಮೂಲಕ ವಿಧಾನಪರಿಷತ್ ನಲ್ಲೂ ಪೂರ್ಣ ಬಹುಮತ ಸಾಧಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ತಿಕ ಮಾಸದಲ್ಲಿ ಹೋಮ-ಹವನ ಮಾಡುತ್ತಿದ್ದೇವೆ. ರೈತರು, ಜನರು ನೆಮ್ಮದಿಯಿಂದಿರಬೇಕು ಎಂದು ಪ್ರಾರ್ಥಿಸಿದ್ದೇನೆ. ಚುನಾವಣೆಗಾಗಿ ಹೋಮ ಮಾಡಿಲ್ಲ ಎಂದು ಹೇಳಿದ್ದಾರೆ.ಚುನಾವಣೆ ಇದೆ ಅಂತಾ ಹೋಮ ಮಾಡಿಲ್ಲ. ಚುನಾವಣೆಗಳು ಬರ್ತಿರ್ತಾವೆ, ಹೋಗ್ತಿರ್ತಾವೆ. ನೂರು ಚುನಾವಣೆಗಳು ಬರುತ್ತವೆ. ಈ ಚುನಾವಣೆ ಮುಗಿಯುತ್ತಿದ್ದಂತೆ, ತಾ.ಪಂ. ಚುನಾವಣೆ ಬರುತ್ತೆ. ಎಂ.ಎಲ್.ಎ., ಎಂ.ಪಿ. ಚುನಾವಣೆ ಬರುತ್ತವೆ. ಇತ್ತೀಚಿಗಷ್ಟೇ ಗ್ರಾ.ಪಂ. ಚುನಾವಣೆ ಮುಗಿದು ಹೋಗಿದೆ. ವರ್ಷವಿಡಿ ಚುನಾವಣೆಗಳು ಬರ್ತಾನೆ ಇರ್ತವೆ. ಹೋಮ ನಿಲ್ಲಿಸೋಕೆ ಆಗುತ್ತಾ? ಎಲೆಕ್ಷನ್ ಗೂ, ಹೋಮಕ್ಕೂ ಸಂಬಂಧವಿಲ್ಲ ಎಂದರು.ಭಗವಂತನ ಕೃಪೆ ಬಿಜೆಪಿ ಮೇಲೆ ಇದೆ. ಕನಿಷ್ಟ 16 ಸ್ಥಾನದಲ್ಲಿ ನಾವು ಗೆಲ್ಲುತ್ತೆವೆ ಎಂದ ಸಚಿವ ಈಶ್ವರಪ್ಪ ಅವರು, ಎಲ್ಲಾ ನಾಯಕರು ಬೂತ್ ಮಟ್ಟದಲ್ಲಿ ಓಡಾಡಬೇಕೆಂದು ತೀರ್ಮಾನಿಸಿದ್ದೇವೆ.

ನಾನು ನಾಳೆಯಿಂದ ತೀರ್ಥಹಳ್ಳಿ, ಹೊನ್ನಾಳಿ, ಚನ್ನಗಿರಿ, ಸೊರಬಕ್ಕೆ ಹೋಗುತ್ತಿದ್ದೇನೆ. ನಮ್ಮ ಸಂಘಟಕರು ಹೇಗೆ ಹೇಳುತ್ತಾರೋ, ಹಾಗೆ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.ನರೇಂದ್ರ ಮೋದಿಯವರು ಗ್ರಾಮೀಣ ಮಟ್ಟದ ಜನರ ಬದುಕು ಸುಧಾರಣೆಯಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಬಗ್ಗೆ ಜನರ ಗಮನ ಸೆಳೆಯುವ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಗ್ರಾ.ಪಂ. ಸದಸ್ಯರು ಈ ಬಗ್ಗೆ ಪ್ರಯತ್ನ ನಡೆಸಬೇಕಿದೆ. ರಾಜ್ಯದಲ್ಲೂ, ಕೇಂದ್ರದಲ್ಲೂ ನಮ್ಮದೇ ಸರ್ಕಾರವಿದೆ. ಇದನ್ನು ಬಳಸಿಕೊಂಡು, ಜನರಿಗೆ ಯೋಜನೆ ತಲುಪಿಸುತ್ತೇವೆ. ರಾಜ್ಯದಲ್ಲಿ ವಿಧಾನಸಭೆಯಲ್ಲಿ ಪೂರ್ಣ ಬಹುಮತವಿದೆ. ಈ ಚುನಾವಣೆ ಮೂಲಕ ವಿಧಾನಪರಿಷತ್ ನಲ್ಲೂ ಪೂರ್ಣ ಬಹುಮತ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…