ಸಾಗರ ನ್ಯೂಸ್…

ದೀಪಾವಳಿ ಸಂಭ್ರಮ ಕಳೆದು ಕಾರ್ತಿಕ ಮಾಸದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ನಡೆಯುತ್ತಿದ್ದು ಭಕ್ತರು ದೀಪ ಬೆಳಗುವುದರ ಮೂಲಕ ಇದನ್ನು ಆಚರಿಸುತ್ತಿದ್ದಾರೆ.
ಸಾಗರದ 8ನೇ ವಾರ್ಡ್ ಶ್ರೀನಗರದ ಭೂತಪ್ಪನ ಕಟ್ಟೆಯಲ್ಲಿ ನಿನ್ನೆ ಸಂಜೆ ಸಂಭ್ರಮದ ಕಾರ್ತಿಕ ದೀಪೋತ್ಸವ ನಡೆಯಿತು…
ಭಕ್ತಾದಿಗಳು ಬೆಳಗ್ಗೆಯಿಂದಲೇ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂದಿತು…

ಗಮನ ಸೆಳೆದ ಕೇರಳದ ಚೆಂಡೆ ವಾದ್ಯ…

ಸಾಗರದ ಶ್ರೀಸಾಯಿ ಚೆಂಡೆ ಬಳಗಕ್ಕೆ ವಿಶೇಷವಾದ ಆಹ್ವಾನವನ್ನು ಶ್ರೀನಗರ ಯುವಜನ ಸಂಘ ನೀಡಿತು ಇದರಂತೆ ಅವರು ನಿನ್ನೆ ಕಾರ್ತಿಕೋತ್ಸವ ಸಂದರ್ಭದಲ್ಲಿ ಕೇರಳದ ಚೆಂಡೆ ತಾಳಬದ್ಧವಾಗಿ ಬಾರಿಸಿದರು ಎಲ್ಲರ ಚಿತ್ತ ಚೆಂಡೆ ಯತ್ತ ಎಂಬ ದೃಶ್ಯ ಕಂಡುಬಂದಿತು
ಅನಿಲ್ ,ಚಂದನ್, ಕಾವ್ಯ,ಸವಿತಾ ,ಆಶಾ ,ರೂಪ, ರಮ್ಯಾ ,ಅಕ್ಷಯ ,ಶ್ರೀರಾಗ್, ಧನ್ಯ,ಮಂಜುನಾಥ್ ಚೆಂಡೆ ವಾದ್ಯ ನಡೆಸಿಕೊಟ್ಟರು.ಶ್ರೀನಗರ ಯುವಜನ ಸಂಘ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಸಮಿತಿ ಶ್ರೀನಗರ ಇವರು ಶ್ರೀ ಸಾಯಿ ಚೆಂಡೆ ಬಳಗ ಕ್ಕೆ ಸನ್ಮಾನಿಸಿದರು…
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು ದಯಾನಂದ್ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು …

ವರದಿ ಸೂರಜ್ ನಾಯರ್