ದಿನಾಂಕ 04-12-2021 ರಂದು ಸಂಜೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುರ್ಲೆ ಗ್ರಾಮದ ಹತ್ತಿರ ಖಾಲಿ ಬಡಾವಣೆಯೊಂದರಲ್ಲಿ ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ನಿಂತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ, ಪಿಎಸ್ಐ ಶಿವಮೊಗ್ಗ ಗ್ರಾಮಾಂತರ ಠಾಣೆ ಮತ್ತು ಸಿಬ್ಬಂದಿಗಳ ತಂಡವು ದಾಳಿ ನಡೆಸಿದಾಗ ಪೊಲೀಸರನ್ನು ನೋಡಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ ಮೂವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆರೋಪಿತರ ಬಳಿ ಮಾದಕ ವಸ್ತು ಗಾಂಜಾ ದೊರೆತಿದ್ದು.

ನಂತರ ಆರೋಪಿತರಾದ 1) ಸುರೇಶ್ 40ವರ್ಷ ಜಗಳೂರು ದಾವಣಗೆರೆ 2) ತಿಪ್ಪೇಶ್ ಯಾದವ್ 27 ವರ್ಷ ಚಳ್ಳಕೆರೆ ಚಿತ್ರದುರ್ಗ 3) ಮುಬಾರಕ್ @ ರೂಪಾಯಿ 20ವರ್ಷ ಟಿಪ್ಪು ನಗರ ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಿ, ಆರೋಪಿತ ರಿಂದ ಅಂದಾಜು ಮೌಲ್ಯ 61,200/- ರೂ ಗಳ ಒಟ್ಟು 2 ಕೆಜಿ 40 ಗ್ರಾಂ ತೂಕದ ಮಾದಕವಸ್ತು ಒಣ ಗಾಂಜಾವನ್ನು ವಶಕ್ಕೆ ಪಡೆದು, ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 0451/2021 ಕಲಂ 20(B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…