ಮೈಲಾರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ
ಶಿವಮೊಗ್ಗ : ನಗರದ ಬಿ.ಹೆಚ್. ರಸ್ತೆಯಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಟಿ ಅಂಗವಾಗಿ ದೇವರ ಸನ್ನಿಧಿಯಲ್ಲಿ ಭಂಡಾರ ಪೂಜಾ, ಭಂಡಾರ ವಿತರಣೆ, ಕಾರ್ತಿಕ ದೀಪೋತ್ಸವ, ಪ್ರಾಕಾರೋತ್ಸವ ಮುಂತಾದ ಪೂಜಾ ಕಾರ್ಯಕ್ರಮಗಳನ್ನಿ ಹಮ್ಮಿಕೊಳ್ಳಲಾಗಿದೆ.

ಡಿ.೯ರ ಗುರುವಾರದಂದು ಭಂಡಾರ ಕಟ್ಟುವ, ಬೀಸುವ ಕಾರ್ಯಕ್ರಮವಿದ್ದು, ಭಕ್ತಾಧಿಗಳು ಭಾಗವಹಿಸಲು ಮುಕ್ತ ಅವಕಾಶವಿರುತ್ತದೆ.
ಡಿ.೧೦ರ ಸಂಜೆ ಭಂಡಾರ ಹಾಗೂ ಪ್ರಸಾಧ ವಿತರಣೆ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುಲು ಕೋರಲಾಗಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…