ಇಂದು ರಾಜ್ಯ ನಾಗರೀಕರ ರಕ್ಷಣಾ ಸಮಿತಿ ಹಾಗೂ ಯುವ ಬ್ರಿಗೇಡ್ ವತಿಯಿಂದ ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದ ಸೇನಾ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಹಾಗೂ ಅವರ ಕುಟುಂಬಸ್ಥರು ಹಾಗೂ ಸೇನಾಧಿಕಾರಿಗಳಿಗೆ ಶಿವಮೊಗ್ಗ ನಗರದ ಸೈನಿಕ ಪಾರ್ಕ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ರಾಜ್ಯಾಧ್ಯಕ್ಷರಾದ ಕೆ ಶೇಖರ್ ಪ್ರಧಾನ ಕಾರ್ಯದರ್ಶಿ ಆರ್ ರಾಘವೇಂದ್ರ ಖಜಾಂಚಿ ಶಿವಮೊಗ್ಗ ವಿನೋದ್ ಸಮಿತಿಯ ಪ್ರಮುಖರಾದ ಹರೀಶ್ ಚಂದನ್ ರಾಜೇಶ್ ವೆಂಕಟೇಶ್ ಸಾಗರ್ ಮತ್ತು ಯುವ ಬ್ರಿಗೇಡ್ ನ ರಾಜೇಶ್ ವಿನಯ್ ಅಚ್ಯುತ್ ಪ್ರವೀಣ್ ವಿಷ್ಣು ಮತ್ತು ವಿವೇಕ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…