ನಿರೀಕ್ಷೆಗೂ ನಿಲುಕದ
ಜೀವನ ಎಲ್ಲರದು
ಎಂದು ನಿರೀಕ್ಷಿಸದ
ಮರಣ ನಿಮ್ಮದು.

ದೇಶ ಸೇವೆಗೆ ಮುಡಿಪಿಟ್ಟ
ನಿಮ್ಮಯ ಜೀವನ
ಈ ಪುಣ್ಯಭೂಮಿಗೆ ಯಾರು
ಊಹಿಸದ ಬಲಿದಾನ.

ದೇಶವ ಕಾಯುತಾ
ವೈರಿಗಳನ್ನೆದುರಿಸುತಾ
ಬಿಸಿಲು ಮಳೆ ಚಳಿ ಗಾಳಿಗೆ
ಜಗ್ಗದ ವೀರ ಯೋಧರಿವರು.

ನೆಲಮುಗಿಲು ಕಡಲಿನಲ್ಲಿ
ದ್ವಿಪಾಂತರಗಳ ಮಡಿಲಿನಲ್ಲಿ
ಪರ್ವತ ಹಿಮಶಿಖರಗಳ ಗಡಿಗಳಲ್ಲಿ
ಪ್ರಾಣವೊತ್ತೆಯಿಟ್ಟ ದೇಶ ಸೇವಕರು.

ವಿಧಿಯಾಟಕ್ಕೆ ಬಲಿಯಾದರೂ
ಅಜರಾಮರವು ನಿಮ್ಮಯ ತ್ಯಾಗ ಬಲಿದಾನ
ಈ ಮಣ್ಣ ಕಣ ಕಣವೂ ಸಾರುವವು
ನಿಮ್ಮಯ ಸೇವೆಯ ಗುಣಗಾನ

ಪ್ರತಿ ಸೇನಾನಾಯಕರಿಗೂ, ವೀರಯೋಧರಿಗೂ ಶಿರಬಾಗಿ ನಮನ
ನಿಮ್ಮಿ.. ವೀರ ಬಲಿದಾನಕ್ಕೆ
ನನ್ನದೊಂದು ಭಾವಪೂರ್ಣ ನುಡಿನಮನ…

*ಶ್ರೀಮತಿ.ಅನಿತಕೃಷ್ಣ.* ಶಿಕ್ಷಕಿ.ತೀರ್ಥಹಳ್ಳಿ.