ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕರಾದ ಚನ್ನಬಸಪ್ಪನವರು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ ಜೂನ್ 9ರಂದು ಪ್ರಕ್ರಿಯೆ ಕೊನೆಗೊಳ್ಳುತ್ತದೆ. ಪ್ರಕ್ರಿಯೆ ಕೊನೆಗೊಂಡ ನಂತರ ಹದಿನೈದು ದಿನದ ಒಳಗಾಗಿ ಫುಡ್ ಕಿಟ್ ತಲುಪಿಸುತ್ತೇವೆ . ನಲವತ್ತೈದು ಸಾವಿರ ಫುಡ್ ಕಿಟ್ ತಲುಪಿಸುವ ಗುರಿ ಹೊಂದಲಾಗಿದೆ. ಈ ಮಧ್ಯದಲ್ಲಿ ವಿರೋಧ ಪಕ್ಷದವರು ಪಾಲಿಕೆ ಮುಂದೆ ಧರಣಿ ನಡೆಸುವಾಗ ಕೋವಿಡ ನಿಯಮಗಳನ್ನು ಪಾಲಿಸಿಲ್ಲ ಇದು ಖಂಡನೀಯ. ವಿರೋಧ ಪಕ್ಷದ ನಾಯಕರುಗಳು ಈ ವಿಷಯಗಳಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ