ಮಾನ್ಯ ಶ್ರೀ ಲಕ್ಷ್ಮೀಪ್ರಸಾದ್, ಐ ಪಿ ಎಸ್ ಪೊಲೀಸ್ ಅಧೀಕ್ಷ ಕರು ಶಿವಮೊಗ್ಗ, ಮಾನ್ಯ ಶ್ರೀ ಶೇಖರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ, ಖಚಿತ ಮಾಹಿತಿ ಮೇರೆಗೆ ಶ್ರೀ ಗಜಾನನ ಸುತಾರ ಪ್ರೊಬೆಶನರಿ ಡಿವೈಎಸ್ ಪಿ ರವರು ತುಂಗಾನಗರ ಪೋಲಿಸ್ ಠಾಣೆಯ ಅಧಿಕಾರಿ ಸಿಬ್ಬಂದಿ, ಶ್ರೀ ಶಂಕರ್ ಡಿಸಿಎಫ್ ಶಂಕರ್ ವಲಯ ಆಲ್ಕೊಳ ಹಾಗೂ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಯವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ

ಟಿಪ್ಪುನಗರ ಏಳನೇ ಕ್ರಾಸ್ ಗೋಡೋನ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 910 ಕೆ.ಜಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದು. ಈ ಸಂಬಂಧ ಶ್ರೀ ಗಜಾನನ ಸುತಾರ, ಪ್ರೊಬೆಶನರಿ ಡಿವೈಎಸ್ಪಿ ರವರ ದೂರಿನ ಮೇರೆಗೆ ಪ್ರಕರಣ ಅರಣ್ಯ ಇಲಾಖೆಯಲ್ಲಿ ದಾಖಲಿಸಲಾಗಿರುತ್ತದೆ. ಆರೋಪಿ ಅಪ್ಸರ್ ಬಂಧಿಸಲಾಗಿದೆ.

ಶ್ರೀ ಗಜಾನನ ಸುತಾರ, ಪ್ರೊಬೆಶನರಿ ಡಿವೈಎಸ್ಪಿ ಹಾಗೂ ಸಿಬ್ಬಂದಿ ರವರ ಕಾರ್ಯಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…