ಶಿವಮೊಗ್ಗ ನಗರದಲ್ಲಿ ಹಲವು ಪತ್ರಿಕೆಗಳು ಮತ್ತು ಆನ್ ಲೈನ್ ಪೋರ್ಟಲ್ ಗಳು ಪ್ರಕಟಗೊಳ್ಳುತ್ತಿದ್ದು ಕಳೆದ ವರ್ಷ ಮತ್ತು ಈ ವರ್ಷ ಪತ್ರಕರ್ತರು ತುಂಬಾ ಸಂಕಷ್ಟದಲ್ಲಿದ್ದು ಪೂಜ್ಯ ಮಹಾಪೌರರು ಪಾಲಿಕೆಯ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯಿಂದ ನೆರವು ಹಾಗೂ ಜಾಹೀರಾತನ್ನು ನೀಡಲು ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದಿಂದ ಮನವಿ ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾದ ಎಚ್ ಎನ್ ಮಂಜುನಾಥ್ ಹಾಗೂ ರಾಕೇಶ್ ಡಿಸೋಜಾ , ಭಂಡಿಗಡಿ ನಂಜುಂಡಪ್ಪ , ಷಡಕ್ಷರಪ್ಪ, ನರೇಂದ್ರಬಾಬು , ವಿಷ್ಣು ಪ್ರಸಾದ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ