ತುಮರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಮೂಲ ಸೌಲಭ್ಯ ಸಿಗದೆ, ಸರಿಯಾದ ಚಿಕಿತ್ಸೆ ಸಿಗದೆ ಮುಳುಗಡೆ ಸಂತ್ರಸ್ಥ ಜನರ ಕಷ್ಟ ಹೇಳತೀರದು, ಸಮಯಕ್ಕೆ ಸರಿಯಾದ ಅಗತ್ಯ ಚಿಕಿತ್ಸೆ ಸಿಗದೆ ಮೊನ್ನೆತಾನೆ ಹಸುಗೂಸೊಂದು ಸಾವನಪ್ಪಿದ್ದು ತುಮರಿ ಬಾಗದ ಜನ ಆತಂಕಕ್ಕೆ ವೊಳಗಾಗಿದ್ದಾರೆ.

ಇಂದು ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತರಾರದ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಶೀಘ್ರವೇ ತುಮರಿ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಸೇವೆ ಒದಗಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು, ಈ ವೇಳೆ ಸಾಗರ ನಗರಸಭೆ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರು ಗಣಪತಿ ಮಂಡಗಳಲೆ,
ತುಮರಿ ಗ್ರಾಮಪಂಚಾಂಯತ್ ಮಾಜಿ ಅದ್ಯಾಕ್ಷರಾದ ಸತ್ಯನಾರಾಯಣ ಜಿ ಟಿ. ಹಾಗೂ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರುಗಳಾದ ಸವಿತಾ ದೇವರಾಜ್, ಎಸ್ ಎಲ್ ನಾಗರಾಜ್, ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರು ಹರೀಶ್ ಗಂಟೆ, ಮುಖಂಡರಾದ ಭರತ್ ಕುಮಾರ್, ಗಣೇಶ್ ತುಮರಿ, ಭೀಮನೇರಿ ಮತ್ತು ಹೇಗ್ಗೋಡು ಗ್ರಾಮಪಂಚಾಯಿತಿ ಅಧ್ಯಕ್ಷರು ಗಲ್ಲಿ ವೆಂಕಟೇಶ್ ಸೂರನಗದ್ದೆ, ಶ್ರೀಧರ್ ಪಟೇಲ್ ಇತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…