__ಕೇಂದ್ರ ಹಾಗೂ ರಾಜ್ಯ ಸಚಿವ ಸಂಪುಟಗಳಲ್ಲಿ ಉನ್ನತ ಖಾತೆಗಳನ್ನು ನಿರ್ವಹಿಸಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಬಡ ವಿದ್ಯಾರ್ಥಿಗಳ ಹಾಗೂ ಬಡರೋಗಿಗಳ ಪಾಲಿನ ಸಂಜೀವಿನಿಯಾಗಿ ಸಮಾಜಮುಖಿ ಸೇವೆ ಸಲ್ಲಿಸಿ ನಿನ್ನೆ ನಿಧನರಾದ ” ಈಡಿಗ ರತ್ನ” ಹಿರಿಯ ಸಮಾಜವಾದಿ ನಾಯಕರಾದ ಆರ್ .ಎಲ್. ಜಾಲಪ್ಪರವರಿಗೆ ಜಿಲ್ಲಾ ಆರ್ಯ ಈಡಿಗ ಸಂಘದಿಂದ ಈಡಿಗ ಸಮುದಾಯ ಭವನದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷರಾದ ಹುಲ್ತಿಕೊಪ್ಪ ಶ್ರೀಧರ್, ಡಾಕ್ಟರ್ ಜಿ. ಡಿ. ನಾರಾಯಣಪ್ಪ , ಎಸ್. ಸಿ. ರಾಮಚಂದ್ರ ,ಸುರೇಶ್ ಕೆ .ಬಾಳೆಗುಂಡಿ, ಜಿ.ಡಿ. ಮಂಜುನಾಥ್, ರಾಜಪ್ಪತೇಕಲೆ, ಉದಯ್ ಕುಮಾರ್, ಆರ್. ರಾಜಶೇಖರ್, ಇಂದೂಧರ್, ಚೂಡಾಮಣಿ,ಗಣೇಶ್ ಇನ್ನಿತರರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…