ವಿಶ್ವ ಹಿಂದು ಪರಿಷತ್ ಬಜರಂಗದಳ ವತಿಯಿಂದ ಕರೋನಾ ಎರಡನೇ ಅಲೆ ಹೆಚ್ಚಾಗಿರುವುದರಿಂದ ಲಾಕ್ ಡೌನ್ ಆಗಿದೆ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಅನೇಕ ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿದ್ದು ಈ ಸೇವಾ ಚಟುವಟಿಕೆಯ 1 ಭಾಗವಾದ ಗೋ ಬಂದು ಈ ಕಾರ್ಯಕ್ರಮದಡಿಯಲ್ಲಿ ರೈತರ ಹೊಲದಲ್ಲಿ ಕಟಾವು ಮಾಡಿದ ಹುಲ್ಲನ್ನು ಬಜರಂಗದಳ ಎಲ್ಲಾ ಕಾರ್ಯಕರ್ತರು ಸೇರಿ ಸಂಗ್ರಹ ಮಾಡಿ ತಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋಶಾಲೆ ಯಾಗ ಸುರಭಿ ಗೋಶಾಲೆಯ ಗೋಮಾತೆಗೆ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರ ಪ್ರಮುಖರಾದ ಮಧುಕರ್ ಜಿ, ಸಂಘದ ಹಿರಿಯರಾದ ನಟರಾಜ್ ಭಾಗವತ್ ಜಿ , ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ವಾಸುದೇವ ಜಿ ,ಜಿಲ್ಲಾ ಕಾರ್ಯದರ್ಶಿಗಳಾದ ನಾರಾಯಣ ವರ್ಣೇಕರ್ , ಬಜರಂಗದಳ ಜಿಲ್ಲಾ ಸಂಚಾಲಕರಾದ ರಾಜೇಶ್ ಗೌಡ , ನಗರ ಅಧ್ಯಕ್ಷರಾದ ಸತೀಶ್ , ಮುಂಚೆ ಮನೆ ಕಾರ್ಯದರ್ಶಿಗಳಾದ ಸುಧಾಕರ , ಚಹಾ ಕಾರ್ಯದರ್ಶಿಗಳಾದ ಮಂಜು ,ಶೇಟ್ ಸುರೇಶ್ ಬಾಬು ಹಾಗೂ ಎಲ್ಲ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ