ಬೆಳಗಾವಿಯಲ್ಲಿ ಕೆಚ್ಚೆದೆಯ ವೀರ ಕನ್ನಡಿಗ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ವಿರೂಪಗೊಳಿಸಿದ ಎಂಇಎಸ್ ಪುಂಡರನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕು ಶಿವಮೊಗ್ಗ ಜಿಲ್ಲೆ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ರಘುವೀರ್ ಸಿಂಗ್ ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ದಿನೇದಿನೆ ಇವರ ಪುಂಡಾಟ ಹೆಚ್ಚುತ್ತಿದ್ದು ರಾಜಕೀಯ ವ್ಯಕ್ತಿಗಳು ತಮ್ಮ ವೋಟಿನ ಲಾಭಕ್ಕೋಸ್ಕರ ಇವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ನಮ್ಮ ನೆಲ ಜಲ ಅನ್ನ ತಿಂದು ನಮ್ಮ ನಾಡಲ್ಲೇ ನಮ್ಮವರನ್ನು ಹಿಂಸಿಸುತ್ತಿದ್ದ ಇವರಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ ಗೃಹ ಸಚಿವರು ಮತ್ತು ಬೆಳಗಾವಿಯ ಕನ್ನಡ ಶಾಸಕರು ಸಂಸದರು ಎಲ್ಲಿ ಹೋಗಿದ್ದಾರೆ ಅವರಿಗೆ ಕಣ್ಣು ಕಾಣುತ್ತಿಲ್ಲವೇ ಅಲ್ಲಿನ ದಬ್ಬಾಳಿಕೆ ದರ್ಪ ಕಾನೂನನ್ನು ಕೈಗೆತ್ತಿ ಕೊಂಡಿರುವ ಎಂಇಎಸ್ ಸಂಘಟನೆಯನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸಂಘಟನೆಯನ್ನು ಬ್ಯಾನ್ ಮಾಡಬೇಕು ಇಲ್ಲವಾದಲ್ಲಿ ಕನ್ನಡಿಗರೇ ಬೀದಿಗಿಳಿದು ಅವರಿಗೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಕನ್ನಡಿಗರು ಸ್ವಾಭಿಮಾನಿಗಳು ಹೇಡಿಗಳಲ್ಲ ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…