ದಿನಾಂಕಃ- 03-12-2021 ರಂದು ಸಂಜೆ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಲೆಗಾರು ಗ್ರಾಮದ ಹತ್ತಿರ NH-69 ರಸ್ತೆಯಲ್ಲಿ ಮಹದೇವ 34 ವರ್ಷ, ಟ್ಯಾಂಕ್ ಮೊಹಲ್ಲಾ ಶಿವಮೊಗ್ಗ ಈತನು KA15X5564 ನೋಂದಣಿ ಸಂಖ್ಯೆಯ BAJA CT 100 ಬೈಕ್ ನಲ್ಲಿ ತನ್ನ ಸ್ನೇಹಿತನಾದ ಗಿರೀಶ್, ಹರಿಗೆ ಗ್ರಾಮ ಶಿವಮೊಗ್ಗರವರನ್ನು ಹಿಂಬದಿ ಕೂರಿಸಿಕೊಂಡು ಹೋಗುತ್ತಿದ್ದಾಗ ಯಾವುದೋ ವಾಹನದ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ಬೈಕ್ ಗೆ ಡಿಕ್ಕಿಹೊಡೆಸಿ, ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದು,

ಅಪಘಾತದ ಪರಿಣಾಮವಾಗಿ ಮಹದೇವ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಮತ್ತು ಗಿರೀಶ್ ನಿಗೆ ತೀವ್ರ ಸ್ವರೂಪದ ಗಾಯಗಳಾಗಿರುತ್ತವೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 339/2021 ಕಲಂ 279, 337, 304(A) IPC ಮತ್ತು 187 IMV ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಲಾಗಿರುತ್ತದೆ.

ಪಿಐ ಸಾಗರ ಗ್ರಾಮಾಂತರ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ತನಿಖೆ ಕೈಗೊಂಡು, ಅಪಘಾತ ಸ್ಥಳದಲ್ಲಿ ದೊರೆತ ವ್ಹೀಲ್ ಕ್ಯಾಪ್ ನ ಆಧಾರದ ಮೇಲೆ ದಿನಾಂಕಃ-30-12-2021 ರಂದು *ಅಪಘಾತ ಪಡಿಸಿರುವ TATA ZEST ಕಾರ್ ಮತ್ತು ಆರೋಪಿ ಚಾಲಕನಾದ ಸುರೇಶ್ ಬಾಬು, 42 ವರ್ಷ, ಹೊಸೂರು ತಮಿಳುನಾಡು ರಾಜ್ಯ* ಈತನನ್ನು ಪತ್ತೆ ಹಚ್ಚಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿರುತ್ತದೆ.

ವರದಿ ಮಂಜುನಾಥ್ ಶೆಟ್ಟಿ…