ದಿನಾಂಕ 29-12-2021 ರಂದು ರಾತ್ರಿ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಶ್ರಯ ಬಡಾವಣೆ ಬೊಮ್ಮನಕಟ್ಟೆಯ ವಾಸಿಯಾದ ಗುರುಪ್ರಸಾದ್, ಟಿ, 26 ವರ್ಷ ಈತನು ನನಗೆ ಆಟೋ ಕೊಡಿಸಿ ಇಲ್ಲದಿದ್ದರೆ ಆಸ್ತಿಯಲ್ಲಿ ಭಾಗ ಮಾಡಿಕೊಡಿ ಎಂದು ತನ್ನ ತಾಯಿಯ ಜೊತೆ ಜಗಳ ಮಾಡುತ್ತಿದ್ದು.

ಈ ಸಂದರ್ಭದಲ್ಲಿ ಈತನ ಸಹೋದರನಾದ ವಿಶ್ವನಾಥನು ಮಧ್ಯಪ್ರವೇಶಿಸಿ ನೀನೆ ದುಡಿದು ಆಟೋ ತೆಗೆದುಕೋ ಅಮ್ಮ ಏಕೆ ಕೊಡಿಸಬೇಕು ನಿನಗೆ ಎಷ್ಟು ಹೇಳಿದರು ಅರ್ಥವಾಗುದಿಲ್ಲವೇ ಎಂದು ಜಗಳವಾಡುತ್ತಿದ್ದಾಗ ಮಾತಿಗೆ ಮಾತು ಬೆಳೆದು ವಿಶ್ವನಾಥನು ಗಾರೆ ಕೆಲಸಕ್ಕೆ ಬಳಸುವ ಮಟ್ಟಗೋಲನ್ನು ತೆಗೆದುಕೊಂಡು ಗುರುಪ್ರಸಾದ್ ನ ತಲೆ ಮತ್ತು ಬಲಗಿವಿಗೆ ಹಲ್ಲೆ ನಡೆಸಿದ್ದು ಪರಿಣಾಮವಾಗಿ ಗುರುಪ್ರಸಾದ್ ನ ತಲೆ ಮತ್ತು ಕಿವಿಯಲ್ಲಿ ರಕ್ತ ಸ್ರಾವವಾಗಿ ಮೃತಪಟ್ಟಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 247/2021 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ವರದಿ ಮಂಜುನಾಥ್ ಶೆಟ್ಟಿ…