ಕ್ರೈಂ ನ್ಯೂಸ್…

ದಿನಾಂಕ 30-12-2021 ರಂದು ಬೆಳಗ್ಗೆ ಡಿ.ವೈ.ಎಸ್.ಪಿ(ಪ್ರೊ) ಪ್ರಭಾರ ಭದ್ರಾವತಿ ಟೌನ್ ವೃತ್ತರವರು ಗಸ್ತಿನಲ್ಲಿದ್ದಾಗ ಹೊಸಮನೆ ಠಾಣಾ ವ್ಯಾಪ್ತಿಯ ಸಂತೆ ಮೈದಾನದಲ್ಲಿ ಯಾರೋ ಮೂರು ಜನ ಆರೋಪಿಗಳು ಕಳ್ಳತನದಿಂದ ತಂದಿರುವ ಮೊಬೈಲ್ ಫೋನ್ ಗಳನ್ನು ಹಂಚಿಕೊಳ್ಳುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ದಾಳಿ ನಡೆಸಿದಾಗ ಎರಡು ಜನರು ತಪ್ಪಿಸಿಕೊಂಡಿದ್ದು,

ಆರೋಪಿ ಸಯ್ಯದ್ ಅಲ್ವಿ 25 ವರ್ಷ ಅನ್ವರ್ ಕಾಲೋನಿ ಭದ್ರಾವತಿ ಈತನನ್ನು ವಶಕ್ಕೆ ಪಡೆದು ಆರೋಪಿತನಿಂದ ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿ ತಂದಿರುವ ಅಂದಾಜು ಮೌಲ್ಯ 6,68,400/- ರೂಗಳ ವಿವಿಧ ಕಂಪನಿಯ ಒಟ್ಟು 55 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ ಗುನ್ನೆ ಸಂಖ್ಯೆ 130/2021 ಕಲಂ 41(d), 102 Crpc, 379 IPC ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಿ ಮಂಜುನಾಥ್ ಶೆಟ್ಟಿ…