ಶಂಕರಘಟ್ಟ, ಡಿ. ೩೧: ಕುವೆಂಪು ವಿಶ್ವವಿದ್ಯಾಲಯದಲ್ಲಿ ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಕಛೇರಿ ಸಹಾಯಕ ರಾಘವೇಂದ್ರ ಕೆ.ಪಿ ಮತ್ತು ಕಿರಿಯ ಸಹಾಯಕಿ ಪ್ರೇಮಾ ಅವರಿಗೆ ವಿವಿಯ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಕುಲಸಚಿವ (ಪರೀಕ್ಷಾಂಗ) ಪ್ರೊ ಸಿ.ಎಂ.ತ್ಯಾಗರಾಜ್, ಹಣಕಾಸು ಅಧಿಕಾರಿ ರಾಮಕೃಷ್ಣ, ಸಂಘದ ಅಧ್ಯಕ್ಷ ಶ್ರೀನಿವಾಸ್, ಮಹೇಶ್.ಪಿ. ಸಿದ್ದರಾಮ, ನಿವೃತ್ತ ನೌಕರರ ಕುಟುಂಬ ವರ್ಗದವರು ಮತ್ತು ಅಧ್ಯಾಪೇತರ ನೌಕರರು ಹಾಜರಿದ್ದರು.