ಶಿವಮೊಗ್ಗ ನಗರದಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ಧ ಕಾನೂನು ರಿತ್ಯಾ ಕ್ರಮಕೈಗೊಳ್ಳಲು ಪಿಎಸ್ಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದ್ದು, ಸದರಿ ತಂಡವು ದಿನಾಂಕಃ- 31-12-2021 ರಂದು ಗಸ್ತಿನಲ್ಲಿದ್ದಾಗ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಲ್ಕೊಳ ಗ್ರಾಮದ ಕೆರೆ ಏರಿಯ ಮೇಲೆ 04 ಜನರು ದ್ವಿ ಚಕ್ರ ವಾಹನವನ್ನು ನಿಲ್ಲಿಸಿಕೊಂಡು ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದಾರೆ.

ಆರೋಪಿತರಾದ 1)ಸದ್ದಾಂ 30 ವರ್ಷ ತರಿಕೆರೆ ಚಿಕ್ಕಮಗಳೂರು, 2)ಶಕೀಲ್ ಮುನಾವರ್, 30 ವರ್ಷ, ತರೀಕೆರೆ, ಚಿಕ್ಕಮಗಳುರು, 3)ಶ್ರೀಕಾಂತ್@ರೊನಾಲ್ಡೋ, 24 ವರ್ಷ, ಎಲ್.ಬಿ.ಎಸ್ ನಗರ ಶಿವಮೊಗ್ಗ, 4)ಸಂತೋಷ@ಹಾವಳಿ, 26 ವರ್ಷ, ವೆಂಕಟೇಶ ನಗರ ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಿ, ಆರೋಪಿತರ ವಶದಿಂದ ಅಂದಾಜು ಮೌಲ್ಯ 45,000/- ರೂಗಹಳ ಒಟ್ಟು 1,250 ಗ್ರಾಂ ತೂಕದ ಮಾದಕ ವಸ್ತು ಗಾಂಜಾ,1310/-ರೂ ನಗದು ಹಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 249/2021 ಕಲಂ 8(c) 20(b) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ವರದಿ ಮಂಜುನಾಥ್ ಶೆಟ್ಟಿ…