ಜಯಕರ್ನಾಟಕ ಸಂಘಟನೆ ಶಿವಮೊಗ್ಗ ಮಹಿಳಾ ವಿಭಾಗವು ಸತತವಾಗಿ 33 ನೇ ದಿನವಾದ ಇಂದು ನಿರಾಶ್ರಿತರಿಗೆ ಊಟ ಹಂಚಿದರು. ಇಂದು ಭಾನುವಾರವಾದ್ದರಿಂದ ಮಹಿಳೆಯರು ಬಿರಿಯಾನಿ ಮಾಡಿ ತಂದಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಜಿಲ್ಲಾಧ್ಯಕ್ಷೆ ನಾಜಿಮಾ ಅವರು ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಿ ಎನ್ ಜಗದೀಶ್ ಅವರ ಸಹಾಯದಿಂದ ಇಂದಿನ ಅಡುಗೆ ತಯಾರಿಸಲಾಗಿದೆ ಈ ಸಂದರ್ಭದಲ್ಲಿ ರಾಜ್ಯ ಕಮಿಟಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ಜಯಕರ್ನಾಟಕ ಸಂಘಟನೆಯ ಮಹಿಳೆಯರು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ ಹಂಚುತ್ತಿರುವುದು ವಿಶೇಷವಾಗಿದೆ.


ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ