ತಾರೆಯರ ಹುಟ್ಟುಹಬ್ಬ ಎಂದರೆ ಅಭಿಮಾನಿಗಳು ಬಹಳ ಸಂಭ್ರಮದಿಂದ ಆಚರಿಸುವುದು ವಾಡಿಕೆ . ಆದರೆ ಶಿವಮೊಗ್ಗದ ಸಿಂಪಲ್* ರಕ್ಷಿತ್ ಶೆಟ್ಟಿ ಅಭಿಮಾನಿ ಬಳಗದ ಸದಸ್ಯರು ತಮ್ಮ ಪ್ರಿಯ ನಟನ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಈ ಲಾಕ್ ಡೌನ್ನಲ್ಲಿ ಯಾವುದೇ ತರಹದ ಕೇಕ್ ಕಟ್ ಮಾಡದೆ ನಿರಾಶ್ರಿತರಿಗೆ ಊಟ ನೀರು ಮತ್ತು ಮಾಸ್ಕ್ ಹಂಚುವ ಮೂಲಕ ಆಚರಿಸಿ ತಮ್ಮ ಪ್ರಿಯ ನಟನ ಹೃದಯ ಗೆದ್ದಿದ್ದಾರೆ. ಇವರ ಕಾರ್ಯವನ್ನು ಮೆಚ್ಚಿ ಸ್ವತಃ ರಕ್ಷಿತ್ ಶೆಟ್ಟಿ ಅವರೇ ದೂರವಾಣಿ ಕರೆ ಮಾಡಿ ಯುವಕರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಕೋವಿಡ ರೂಲ್ಸ್ ನಿಂದಾಗಿ ಮಂಜುನಾಥ್ ಶೆಟ್ಟಿ , ಸಂದೀಪ್ ಹಾಗೂ ರಾಘವೇಂದ್ರ ಉಪಸ್ಥಿತರಿದ್ದರು. ಈ ಎಲ್ಲಾ ಕಾರ್ಯಗಳಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮಂಜುನಾಥ್ ಶೆಟ್ಟಿ ಅವರು ಅಭಿನಂದನೆಗಳನ್ನು ತಿಳಿಸಿದರು.


ವರದಿ ಮೋಹನ್ ದೇವರಾಜ್ ಶಿವಮೊಗ್ಗ