ಕುಂದಗೋಳ ನ್ಯೂಸ್…

ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಧಾರವಾಡ ತಾಲೂಕು ಪಂಚಾಯತ್ ಕುಂದಗೋಳ ಪಶುಪಾಲನಾ ಮತ್ತು ಪಶು ಪಶುವೈದ್ಯಕೀಯ ಇಲಾಖೆ ಕುಂದಗೋಳ ವತಿಯಿಂದ ಜಾನುವಾರುಗಳಿಗೆ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು ಶಿಬಿರವನ್ನು ಜಾನುವಾರಿಗೆ ಪೂಜೆ ಸಲ್ಲಿಸಿ ನಂತರ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ರಡ್ಡೇರ ಉದ್ಘಾಟಿಸಿ ಆಕಳುಗಳಿಗೆ ಪೋಸ್ಟಿಕ್ ಪೌಡರ್ ವಿತರಣೆ ಮಾಡಿದರು.

ನಂತರ ಮಾತನಾಡಿ ಪಶು ಇಲಾಖೆಯ ವತಿಯಿಂದ ಈಗಾಗಲೇ ಕಾಲ್ ಬ್ಯಾನಿ ಬಾಯಿ ಭ್ಯಾನಿಗೆ ಇಂಜಕ್ಷನ್ ನೀಡಲಾಗಿದ್ದು ಈಗ ಜಾನುವಾರುಗಳಿಗೆ ಸಂಭಂದ ಪಟ್ಟ ಏನಾದರೂ ಸಮಸ್ಯೆ ಇದ್ರೆ ಚಿಕಿತ್ಸೆ ನೀಡುತ್ತಾರೆ ಇದರ ಸದುಪಯೋಗ ಎಲ್ಲಾ ರೈತರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಕುಂದಗೋಳ ಪಶುವೈದ್ಯಾಧಿಕಾರಿಳಾದ ಮಂಜುನಾಥ್ ಹಾಗೂ ಗ್ರಾಮದ ಗುರು ಹಿರಿಯರು ರೈತರು ಪಶು ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…