ಅಲ್ಲಾಪೂರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಪಕ್ಕದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕುಳಿತುಕೊಳ್ಳುವ ಹೂಸ ಸಿಮೆಂಟ್ ಚೇರನ್ನು ಅಲ್ಲಾಪೂರ ಗ್ರಾಮದ CRPF ಯೋಧ ಹನುಮಂತಪ್ಪ ಪಕೀರಪ್ಪ ಬದ್ರಾಪುರ ಇವರ ಸವಿ ನೆನಪಿನ ಕಾಣಿಕೆಯನ್ನು ನೀಡಿದ್ದಾರೆ ಇದನ್ನು ಇವತ್ತು ಕುಂದಗೋಳ ಕಲ್ಯಾಣಪುರ ಬಸವಣ್ಣನವರು ಪೂಜೆ ಸಲ್ಲಿಸಿ ಉದ್ಘಾಟಿಸಿದರು ನಂತರ ತಾವು ಮತ್ತು ಗ್ರಾಮದ ಹಿರಿಯರು ಅದರ ಮೇಲೆ ಕುಳಿತು ಚಾಲನೆ ನೀಡಿದರು.

ಗ್ರಾಮದಲ್ಲಿ ಬಸ್ ನಿಲ್ದಾಣ ಇರುವುದು ಇಲ್ಲಾ ಸಾರ್ವಜನಿಕರಿಗೆ ಬಸ್ ಬರುವವರೆಗೂ ಕುಳಿತು ಕುಳಿತುಕೊಳ್ಳಲು ಬಹಳಷ್ಟು ತೊಂದರೆ ಉಂಟಾಗಿತ್ತು ಇದರಿಂದ ಸಾರ್ವಜನಿಕರಿಗೆ ಬಸ್ ಬರುವರೆಗೂ ಕುಳಿತುಕೊಳ್ಳಲು ಬಹಳಷ್ಟು ಅನುಕೂಲವಾಗುತ್ತದೆ ಇದನ್ನು ಹಾಳಾಗದಂತೆ ಗ್ರಾಮದ ಸಾರ್ವಜನಿಕರು ಕಾಪಾಡಿಕೊಳ್ಳಲು ಕುಂದಗೋಳ ಕಲ್ಯಾಣಪುರ ಬಸವಣ್ಣನವರು ಸಲಹೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲಿಕಾರ್ಜುನ ‌ರಡ್ಡೇರ ಗ್ರಾಮದ ಹಿರಿಯರಾದ ಗುರುಸಿದ್ದಪ್ಪ ಗೋಪಾಳಿ ಮುದುಕಪ್ಪ ಮಸನಾಳ ಬಸುರಾಜ್ ಮ್ಯಾಗೇರಿ ಮಂಜುನಾಥ್ ಬದ್ರಾಪುರ ಕಲ್ಲಪ್ಪ ಗೌಡನ್ನವರ್ .ಷಣ್ಮುಖ ಇಂಗಳಗಿ ಬಸು ಜಾವುರ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು

ವರದಿ ಮಂಜುನಾಥ್ ಶೆಟ್ಟಿ…