ಶಿವಮೊಗ್ಗ: ಊರಗಡೂರಿನ ಮದಾರಿಪಾಳ್ಯದ ಮೊಹಮ್ಮದ್ ಜಬೀವುಲ್ಲಾ ಅವರ ಮನೆಯ ಸ್ನಾನ ಗೃಹದ ಪೈಪ್ ನಲ್ಲಿ ಮೂರು ತಿಂಗಳಿಂದ ಹಾವೊಂದು ವಾಸವಾಗಿದ್ದು, ನಿನ್ನೆ ಸ್ನೇಕ್ ಕಿರಣ್ ಸುರಕ್ಷಿತವಾಗಿ ಹಿಡಿದಿದ್ದಾರೆ.

ಪೈಪ್ ನಿಂದ ಹಾವು ಮೂರ್ನಾಲ್ಕು ಬಾರಿ ಹೊರಗೆ ಬಂದು ಒಳಗೆ ಹೋಗಿರುವುದನ್ನು ಗಮನಿಸಿದ ಮನೆಯವರು ಆತಂಕಗೊಂಡು ಸ್ನೇಕ್ ಕಿರಣ್ ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಬಂದ ಕೂಡಲೇ ಮೊಹಮ್ಮದ್ ಜಬೀವುಲ್ಲಾ ನಿವಾಸಕ್ಕೆ ತೆರಳಿದ ಸ್ನೇಕ್ ಕಿರಣ್ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…