ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಮಾತನಾಡಿ ಶಿವಮೊಗ್ಗ ಜಿಲ್ಲೆಯ ಸ್ಥಿತಿಗತಿಗಳನ್ನು ವಿವರಿಸಿದರು . ಪ್ರಾರಂಭದ ದಿನಗಳಲ್ಲಿ ಕೋವಿಡ ಲಸಿಕೆ ಹಾಕಲು ನಾವು ಎಲ್ಲರಿಗೂ ಬನ್ನಿ ಎಂದು ಕರೆಯುವ ಪರಿಸ್ಥಿತಿ ಇತ್ತು ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಲ್ಲರೂ ಸ್ವೇಚ್ಛೆಯಿಂದ ಲಸಿಕೆಗಾಗಿ ಬರುತ್ತಿದ್ದಾರೆ ಹಾಗಾಗಿ ಲಸಿಕೆ ಅಭಾವ ಕಾಣಿಸುತ್ತಿದೆ . ಇನ್ನೂ 2ರಿಂದ 3ದಿನಗಳಲ್ಲಿ ಲಸಿಕೆ ಬಂದು ತಲುಪಲಿದೆ. ಉಸ್ತುವಾರಿ ಸಚಿವರು ಸೊರಬದಲ್ಲಿ ಭಾನುವಾರ ಕೋವಿಡ ಆಸ್ಪತ್ರೆ ಪ್ರಾರಂಭಿಸುವುದಾಗಿ ತಿಳಿಸಿದರು .

ವರದಿ: ರಾಘವೇಂದ್ರ ಬಾಪಟ್ ಸೊರಬ