ಶಿವಮೊಗ್ಗ: ನಿನ್ನೆ ಬೆಳಿಗ್ಗೆ ನಗರದ ಡಿವಿಎಸ್ ರಂಗಮಂದಿರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಶತಮಾನೋತ್ಸವದ ಅಂಗವಾಗಿ ಕೋವಿಡ್ ನಿಂದ ನೊಂದ ಮಹಿಳೆಯರಿಗೆ ಹೊಲಿಗೆಯಂತ್ರ ವಿತರಣೆ ಹಾಗೂ ಫುಡ್ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.

30 ಜನ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಹೊಲಿಗೆಯಂತ್ರ, 100 ಜನರಿಗೆ ಫುಡ್ ಕಿಟ್ ವಿತರಿಸಲಾಯಿತು.ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ರೆಡ್ ಕ್ರಾಸ್ ಛೇರ್ಮನ್ ಎಸ್.ಪಿ. ದಿನೇಶ್, ಕಾರ್ಯದರ್ಶಿ ಡಾ. ದಿನೇಶ್, ರಾಜ್ಯ ಶಾಖೆಯ ಡಾ. ವಿ.ಎಲ್.ಎಸ್. ಕುಮಾರ್ ಹಾಗೂ ಪ್ರಮುಖರಾದ ವಿಜಯಕುಮಾರ್, ಅಶ್ವತ್ಥನಾರಾಯಣ ಶೆಟ್ಟಿ, ಧರಣೇಂದ್ರ ದಿನಕರ್, ಬಸವರಾಜ್, ವಸಂತ್ ಹೋಬಳಿದಾರ್, ರೋ. ಜಿ. ವಿಜಯಕುಮಾರ್, ಎಸ್. ರಾಜಶೇಖರ್, ಗಿರೀಶ್, ಎಡ್ವರ್ಡ್ ಪಿಂಟೋ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…