ಅಧಿಕಾರ ಹೊಂದಿದವರಿಗೆ ಸರ್ವ ಸದಸ್ಯರು ಸಹಕಾರ ಕೊಡುವುದರಿಂದ ಸಂಸ್ಥೆ ಗಳ ಬೆಳವಣಿಗೆ ಸಾದ್ಯ ಎಂದು ಶಿವಮೊಗ್ಗ ಯೂತ್ ಹಾಸ್ಟೇಲ್ಸ್ ಅಸೋಸಿಯೇಶನ್ ನ ಸರ್ವ ಸದಸ್ಯರ ಸಭೆಯಲ್ಲಿ ಹೊಸ ಆಡಳಿತ ಮಂಡಳಿ ಅವಿರೋದವಾಗಿ ಆಯ್ಕೆ ಯಾದವರ ಪಟ್ಟಿ ಬಿಡುಗಡೆ ಮಾಡಿದ ರಾಷ್ಟ್ರೀಯ ಆಡಳಿತ ಮಂಡಳಿಯ ಸದಸ್ಯ ಎಸ್.ಎಸ್‌.ವಾಗೇಶ್ ನುಡಿದರು.

ಅಧಿಕಾರ ಹೊಂದಿದವರೆ ಎಲ್ಲಾ ಕಾರ್ಯ ಮಾಡಲು ಕಷ್ಟ ವಾಗುತ್ತದೆ. ಆದ್ದರಿಂದ ಎಲ್ಲರೂ ಸಹಕಾರ ನೀಡುವುದರಿಂದ, ಹೆಚ್ಚಿನ ಕಾರ್ಯಕ್ರಮ ಆಯೋಜಿಸಲು ಸಾದ್ಯ ಇದರಿಂದ ಹೊಸ ಸದಸ್ಯರ ಸೇರ್ಪಡೆ ಸಾದ್ಯ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡುವುದರಿಂದ ತಾವು ಚಾರಣ ಹಮ್ಮಿ ಕೊಂಡಾಗ ಹೆಚ್ಚು ಜನರು ಬರುತ್ತಾರೆ. ಇದರಿಂದ ಆಗಿಂದಾಗೆ ಚಟುವಟಿಕೆ ಹಮ್ಮಿಕೊಂಡು ಸಂಘಟಣೆ ಬೆಳವಣಿಗೆಗೆ ಸಹಕಾರಿ ಎಂದರು.

ಮುಖ್ಯ ವೀಕ್ಷಣೆಗೆ ಆಗಮಿಸಿದ ರಾಜ್ಯ ಉಪಾಧ್ಯಕ್ಷ ಸತೀಶ್ ರವರು, ಅತ್ಯುತ್ತಮವಾಗಿ ಕಾರ್ಯಚಟುವಟಿಕೆ ಯಿಂದ ಕೂಡಿದ್ದ ಸಂಘಟಣೆ ಇತ್ತೀಚೆಗೆ ಏಕೊ ಹಿಂದಡಿ ಇಡಿಸಿತ್ತು ಈಗ ಮತ್ತೆ ಚಾಲನೆ ದೊರೆತಿರುವುದು ಚಾರಣಗರಿಗೆ ಹೆಚ್ಚಿನ ಅನುಕೂಲ ಮಾಡಿ ಕೊಡಲು ಸಾದ್ಯ. ಹೊಸ ಆಡಳಿತ ಮಂಡಳಿಗೆ ಅಭಿನಂತಿಸಿ, ಉತ್ತಮ ಕಾರ್ಯ ಮಾಡಲಿ ಎಂದು ತಿಳಿಸಿದರು. ವಿಕ್ಷಕರಾಗಿ ಆಗಮಿಸಿದ ಎಸ್.ಎಸ್.ವಾಗೇಶ್ ಮತ್ತು ಸತೀಶ್ ಕುಮಾರ್ ರವರನ್ನು ಸನ್ಮಾನಿಸಿದ ಛೇರ್ಮನ್ ಹರೀಶ್ ಪಂಡಿತ್.

ಈ ದಿನದ ವಾರ್ಷಿಕ ಮಹಾ ಸಭೆ ಯು ಸಾಂಗ ವಾಗಿ ನೆರವೇರಿತು ಹೊಸ ಆಡಳಿತ ಮಂಡಳಿ ಉತ್ತಮ ಕಾರ್ಯಕ್ರಮ ಹಮ್ಮಿ ಕೊಳ್ಳಲು ಉತ್ಸಾಹದಲ್ಲಿದೆ ಸರ್ವ ಸದಸ್ಯರ ಸಹಕಾರ ಅಗತ್ಯವಾಗಿ ನೀಡಬೇಕು ಎಂದರು.

ವರದಿ ಮಂಜುನಾಥ್ ಶೆಟ್ಟಿ…