ವಿದ್ಯಾರ್ಥಿಗಳನ್ನು ಭವಿಷ್ಯದ ವಿಜ್ಞಾನಿಗಳನ್ನು ರೂಪಿಸಿ ಎಳೆಯ ವಯಸ್ಸಿನಲ್ಲೇ ವೈಜ್ಞಾನಿಕ ವಿಧಾನದ ಪರಿಚೆಯ ಮಾಡಿಸುವ ಕಾರ್ಯವಾಗಬೇಕು ಎಂದು ಡಯಟ್ ಶಿಕ್ಷಣ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಡಾ|| ನಾಗರಾಜ್ ಅವರು ಇಂದು ಬೆಳಿಗ್ಗೆ ಡಯಟ್ ಕಾಲೇಜು ಆವಣರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಪದವಿಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಇಂದು ಬೆಳಿಗ್ಗೆ ಶಿವಮೊಗ್ಗ ಜಿಲ್ಲಾಮಟ್ಟದ ಯುವ ವಿಜ್ಞಾನಿ ಸ್ಪರ್ಧೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮಕ್ಕಳಲ್ಲಿ ಮೂಲ ವಿಜ್ಞಾನದ ವಿಷಯಗಳಲ್ಲಿ ಮಕ್ಕಳ ಆಸಕ್ತಿ ಹಾಗೂ ಚಿಂತನ ಕೌಶಲ್ಯಗಳನ್ನು ರುದ್ಧಿಸಬೇಕು ಇಂದು ವಿಜ್ಞಾನ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದಿದೆ, ಮಕ್ಕಳಿಗೆ ವಿಜ್ಞಾನದ ಆಸಕ್ತಿ ಮೂಡಿಸುವುದರ ಜೊತೆಗೆ ಸಂಶೋಧನಾತ್ಮಕ ಮನೋಭಾವನೆಯನ್ನು ಬೆಳಸಬೇಕು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ರಾ.ವಿ.ಪ ರಾಜ್ಯಕಾರ್ಯಕಾರಿ ಸಮಿತಿಯ ಸದಸ್ಯರಾದ ಫ್ರಾನ್ಸಿಸ್ ಜಿ ಬೆಂಜುಮ್ ವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ರೀಯಾತ್ಮಕ ಕೌಶಲ್ಯವನ್ನು ವೃಧ್ದಿಸಿಕೊಳ್ಳಲು ಹೊಸ ಹೊಸ ವೈಜ್ಞಾನಿಕ ಆಲೋಚನೆಗಳನ್ನು ಆವೀಷ್ಕರಿಸಲು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸದಾ ನಿಮ್ಮೊಂದಿಗೆ ಇದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮುಖಾಂತರ ತಮ್ಮ ವೈಜ್ಞಾನಿಕ ಮನೋಭಾವನೆಗಳನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಹೊಸ ಹೊಸ ವಿಜ್ಞಾನಿಗಳಾಗಿ ದೇಶಕ್ಕೆ ಪದಾರ್ಪಣೆ ಮಾಡಿ ಒಳ್ಳೆಯ ಕೊಡುಗೆಗಳನ್ನು ನೀಡಬೇಕು ಎಂದು ನುಡಿದರು.

ವಿಜ್ಞಾನ ಪರಿಷತ್ತಿನ ಕ.ರಾ.ವಿ.ಪದ ಜಿಲ್ಲಾಧ್ಯಕ್ಷರಾದ ಡಾ|| ಶ್ರೀಪತಿ ಮಾತನಾಡುತ್ತಾ ಇಂತಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಮಾಜಕ್ಕೆ ಅನುಕೂಲವಾಗುವಂತ ಉತ್ತಮ ಸಂದೇಶಗಳನ್ನು ನೀಡುವಂತಹ ಮಾಡೆಲ್‌ಗಳನ್ನು ತಯಾರುಮಾಡಿ ಪ್ರಶಸ್ತಿಗೊಳಿಸಿ ರಾಜ್ಯ ಹಾಗೂ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಯ ಪ್ರತಿಭೆಗಳನ್ನು ಹೆಚ್ಚಿಸಬೇಕು ಎಂದು ಅನೇಕ ವಿಜ್ಞಾನದ ಮಾಹಿತಿಗಳನ್ನು ತಿಳಿಸಿದರು.

ಸಮಾರಂಭದಲ್ಲಿ ಉಪಾಧ್ಯಕ್ಷರಾದ ಡಾ|| ಪರಿಸರ ನಾಗರಾಜ್, ಜೆ.ಎನ್.ಎನ್.ಸಿ. ಪ್ರಾಧ್ಯಪಕರಾದ ಹೆಚ್.ಬಿ.ಸುರೇಶ್, ಜಿಲ್ಲಾ ಸಂಯೋಜಕರು ಶ್ರೀಮತಿ ಗಾಯಿತ್ರಿ ಪಟೇಲ್, ಕಾರ್ಯದರ್ಶಿ ಲೋಕೇಶ್ವರಪ್ಪ ಎಸ್.ಎನ್., ಕ.ರಾ.ವಿ.ಪ. ಅಜೀವ ಸದಸ್ಯರಾದ ಡಾ|| ರಶ್ಮಿ ಫ್ರಾನ್ಸಿಸ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಸಂಘದ ಸಹಕಾರ್ಯದರ್ಶಿ ಜಿ.ವಿಜಯಕುಮಾರ್, ಶಂಕರ್‌ಗೌಡ ಪಟೇಲ್, ಶ್ರೀಮತಿ ವೀಣಾ ಹಾಗೂ ಕ.ರಾ.ಪಿ.ಪ ದ ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ೯ ರಿಂದ ೧೨ನೇ ತರಗತಿಯ ಜಿಲ್ಲೆಯ ೨೮ ವಿದ್ಯಾರ್ಥಿನಿಯರು, ಯುವ ವಿಜ್ಞಾನಿಗಳು ಪಾಲ್ಗೊಂಡಿದ್ದರು.

ವರದಿ ಮಂಜುನಾಥ್ ಶೆಟ್ಟಿ…